
ಚುನಾವಣೆ ಕಟ್ಟು ನಿಟ್ಟಿನ ಕ್ರಮಕ್ಕೆ ಸನ್ನದ್ದ : ಮಹೇಶ ಮಾಲಗಿತ್ತಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ,20- ಲೋಕಸಭಾ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ-ತಂಡ ಸಿದ್ದವಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾ ಅಧಿಕಾರಿ ಮತ್ತು ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.
ಅವರು -ನಗರದ ತಹಶೀಲ ಕಾರ್ಯಾಲಯದಲ್ಲಿ ಮಾತನಾಡಿ ಈಗಾಗಲೇ ಗಂಗಾವತಿ,ಕನಕಗಿರಿ,ಕಾರಟಗಿಗಳಲ್ಲಿ ಚುನಾವಣೆ ಕುರಿತು ಸ್ಕಾಯಡ ಂಡಗಳನ್ನು ರಚಿಸಲಾಗಿದೆ. ಎಲ್ಲಾ ಕಡೆಯಲ್ಲೂ ಚೆಕ ಪೋಸ್ಟ ಮಾಡಲಾಗಿದೆ.
ಸಾರ್ವಜನಿಕರಿಗೆ ಅನಧಕೃತದ ಬಗ್ಗೆ ಮಾಹಿತಿ ಸಿಕ್ಕರೆ ನೀಡಿ ನಿಮ್ಮ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಅನಧಿಕೃತ ಚುನಾವಣೆ ಮಾಡುವರ ವಿರುದ್ದ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಯು ನಾಗರಾಜ, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ತಾಲೂಕ ಪಂಚಾಯತ ಇಓ ಲಕ್ಷ್ಮೀ ದೇವಿ, ಗ್ರಾಮೀಣ ಪೋಲಿಸಠಾಣೆ ಪಿಐ ಸೋಮಶೇಖರ ಜುಠಲ,ಚುನಾವಣೆ ವಿಭಾಗದ ರವಿಕುಮಾರ ಮುಂತಾದವರು ಉಪಸ್ಥೀರಿದ್ದರು.