
ಅಯೋಧ್ಯಾ ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಟಾಪನಾ ಕಾರ್ಯಕ್ರಮ
ವಿಶ್ವಹಿಂದೂ ಪರಿಷತ್ ಕೊಪ್ಪಳ ನಗರ ಘಟಕದಿಂದ
ಮನೆ ಮನೆಗೆ ಆಮಂತ್ರಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೩೧- ಅಯೋಧ್ಯಾ ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಟಪನಾ ಕಾರ್ಯಕ್ರಮದ ಅಂಗವಾಗಿ ವಿಶ್ವಹಿಂದೂ ಪರಿಷತ್ ಕೊಪ್ಪಳ ನಗರ ಘಟಕದಿಂದ ಬನ್ನಿಕಟ್ಟಿ ಉಪನಗರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ – 19ರಿಂದ 24 ರ ವರೆಗಿನ ವಾರ್ಡ್ ಗಳಲ್ಲಿ ಪ್ರತಿಯೊಂದು ಮನೆಗೂ ತಲೂಪಿಸಲಾಅಯಿತು.
ಶ್ರೀ ರಾಮನ ಅನುಗ್ರಹ ಮಂತ್ರಾಕ್ಷತೆ, ಮಂದಿರದ ಮಾಹಿತಿ ಪತ್ರಕ ಮತ್ತು ಮಂದಿರದ ಭಾವಚಿತ್ರಗಳನ್ನು 4 ವಾರ್ಡ್ ಗಳಿಗೂ ತಲುಪಿಸುವ ಅಭಿಯಾನಕ್ಕೆ ಪದಕಿ ಬಡಾವಣೆಯಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆಯ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರಸೇವಕರಾದ ಶ್ರೀ ಕೃಷ್ಣ ಸೊರಟೂರು,ವಿ.ಹೆಚ್.ಪಿ.ಯ ಕೊಪ್ಪಳ ನಗರ ಘಟಕದ ಶ್ರೀ ನಾಗರಾಜ ನಾಯಕ್, ಲಕ್ಷ್ಮಣ ಅಗ್ನಿಹೋತ್ರಿ, ಆನಂದ ಮಹೇಂದ್ರಕರ್, ಶ್ರೀಮತಿ ಮಧುರಾ ಕರಣಂ ಅವರನ್ನೊಳಗೊಂಡ ಮಾತೆಯರೂ ಉಪಸ್ಥಿತರಿದ್ದರು.