
ಆನೆಗುಂದಿ ಪದ್ಮನಾಭ ತೀರ್ಥರ ಆರಾಧನೆ
ತಲಾ ಒಂದು ವರೆ ದಿನ ಅವಕಾಶ ನೀಡಿದ ಸುಪ್ರೀಂ ಕೋರ್ಟ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 09- ಮಧ್ವ ಮಠದ ಐತಿಹಾಸಿಕ ಕ್ಷೇತ್ರ ನವವೃಂದಾವನಗಡ್ಡೆಯಲ್ಲಿ ರಾಯರಮಠ ಹಾಗೂ ಉತ್ತರಾಧಿ ಮಠಕ್ಕೆ ತಲಾ ಒಂದೂವರೆ ದಿನ ಪದ್ಮನಾಭ ತೀರ್ಥರ ಆರಾಧನೆ ನಡೆಸಲು ಅನು ಮತಿ ದೊರೆತಿದೆ.
ಈ ಕುರಿತು ಮಧ್ಯತಂರ ತೀರ್ಪು ನೀಡಿ ಆದೇಶ ನೀಡಿರುವ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ಆರಾಧನೆಗೆ ಉಭಯ ಮಠಗಲಿಗೆ ಅನುಮತಿ ನೀಡಿದ್ದು ಮತ್ತೆ ಗೊಂದಲ ಮುಂದು ವರೆದಿದೆ.
ತೀರ್ಪು; ಪದ್ಮನಾಭ ತೀರ್ಥರ ಪೂಜೆಗಾಗಿ ರಾಯರಮಠ ಹಾಗೂ ಉತ್ತರಾದಿ ಮಠದವರ ನಡುವೆ ಭಿನ್ನಮತವಿದೆ. ಈ ವಿವಾದ ಈಗ ಸುಪ್ರೀಂ ಕೋರ್ಟ್ ನಲ್ಲಿದ್ದು ಆರಾಧನೆ ಇರುವ ಕಾರಣ ಮಧ್ಯಂತರ ತೀರ್ಪು ನೀಡಿ ಆದೇಶ ಹೊರಡಿಸಿದೆ.
ರಾಯರಮಠ ; ಇದೇ ಡಿಸೆಂಬರ್ 10 ಹಾಗೂ 11ರ ಮಧ್ಯಾಹ್ನದ ತನಕ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದವರಿಂದ ಆರಾಧನೆ ಅಂಗವಾಗಿ ಪೂಜೆ ನಡೆಯಲಿದೆ.
ಉತ್ತರಾದಿ ಮಠ; ಡಿಸೆಂಬರ 11 ಮಧ್ಯಾಹ್ನದ ಬಳಿಕದಿಂದ ಡಿ. 12ರ ರವರೆಗೆ ಉತ್ತರಾದಿ ಮಠದವರಿಗೆ ಆರಾದನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ವಾಗತ ; ಮೊದಲ ಒಂದೂವರೆ ದಿನ ಆರಾಧನೆ ನಡೆಸಲು ನಮಗೆ ಅವಕಾಶ ನೀಡಿರುವುದನ್ನು ಸ್ವಾಗತಿಸಿ ಆರಾಧನಾ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ರಾಯರ ಮಠದ ಪ್ರಮುಖರು ಮನವಿ ಮಾಡಿದ್ದಾರೆ.