
ಒಂದು ದಿನದ ವಿದ್ಯಾರ್ಥಿ ನಿಲಯದ ಪ್ರಸಾದ ವೆಚ್ಚ ಭರಿಸಲು ನಿರ್ಧಾರ
ಗವಿಮಠ ಶ್ರೀಗಳ ಗೆಳೆಯರ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ
ವಿದ್ಯಾರ್ಥಿಗಳ ನಿರ್ಧಾರವನ್ನು ಬೆಂಬಲಿಸುತ್ತಿರುವ ಗುರುಗಳು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೬- ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ 1997-98 ನೇ ಸಾಲಿನ ಕಲಾ ವಿಭಾಗದ ಅಂತಿಮ ವರ್ಷದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಗೆಳೆಯರ ಬಳಗ ತೆಗೆದುಕೊಂಡಿರುವ ಗವಿಮಠ ಹಾಸ್ಟೇಲ್ ಒಂದು ದಿನದ ವೆಚ್ಚವನ್ನು ಪ್ರತಿ ವರ್ಷವೂ ನೀಡುವ ನಿರ್ಧಾರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ನಿರ್ಧಾರಕ್ಕೆ ಗುರುಗಳು ಸಹ ಸಾಥ್ ನೀಡಲು ಮುಂದೆ ಬಂದಿರುವುದು ವ್ಯಾಪಕ ಪ್ರಸಂಶೆಗೆ ಪಾತ್ರವಾಗಿದೆ.
ಹೌದು, ಗವಿಮಠ ಶ್ರೀಗಳ ಗೆಳೆಯರ ಬಳದ ರಜತ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅನೇಕರು ತಮ್ಮ ಕಾಣಿಕೆಯನ್ನು ನೀಡಲು ಮುಂದೆ ಬಂದಿದ್ದಾರೆ. ಅಷ್ಟೇ ಅಲ್ಲಾ ಇದಕ್ಕೆ ಗುರುಗಳು ಸಹ ನಾವು ಭಾಗಿಯಾಗಿತ್ತೇವೆ, ಇದನ್ನು ನಿರಂತರವಾಗಿ ನಡೆಸಿಕೊಂಡು ಹೋಗೋಣ ಎಂದು ವಿದ್ಯಾರ್ಥಿಗಳ ಬೆನ್ನುತಟ್ಟಿದ್ದಾರೆ.
ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ. ವೀರೇಶ ಕಾತರಕಿ ಅವರು, ಈಗ ಸರ್ಕಾರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ವಿದ್ಯಾರ್ಥಿಗಳ ಈ ನಿರ್ಧಾರವನ್ನು ಬೆಂಬಲಿಸಿ, ನನಗೂ ಸಹ ಇಂಥ ಅಮೂಲ್ಯ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ಪ್ರತಿ ವರ್ಷವೂ ನಾನು ಸಹ ಇದರಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.
ಇನ್ನು ವಿವಿಧೆಡೆ ನಾನಾ ಕರ್ತವ್ಯದಲ್ಲಿ ಇರುವ ಹಾಗೂ ವಾಣಿಜ್ಯೋಧ್ಯಮಿಗಳು ಆಗಿರುವವರು ಸಹ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ನಾನಾ ಕಾರಣಗಳಿಗೆ ನಮಗೆ ಬರಲು ಆಗಿಲ್ಲ. ಆದರೆ, ಇಂಥ ಮಹಾನ್ ಕಾರ್ಯಕ್ಕೆ ನಾವು ಸದಾ ಸಿದ್ದರಿದ್ದೇವೆ ಎಂದು ಬೆಂಬಲಿಸಿದ್ದಾರೆ.
ಹುಟ್ಟಿಕೊಳ್ಳಲಿದೆ ಸಂಘ – ಗವಿಮಠ ಶ್ರೀಗಳ ಗೆಳೆಯರ ಬಳಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಗುರುವಂದನೆ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮದ ಬಳಿಕ ಸಭೆ ಸೇರಿ, ಇದು ಸ್ನೇಹ ಅಜರಾಮರವಾಗಬೇಕು. ಹೀಗಾಗಿ, ಇದಕ್ಕಾಗಿ ಗವಿಮಠ ಶ್ರೀಗಳ ಗೆಳೆಯರ ಬಳಗ ಎನ್ನುವ ಸಹಾಕರ ಸಂಘವನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲಾ, ನಮ್ಮ ಗೆಳೆಯರು ಸಂಕಷ್ಟದಲ್ಲಿ ಇದ್ದರೇ, ಆರೋಗ್ಯ ಸಮಸ್ಯೆಯಾದರೇ ಅವರಿಗೆ ಸಹಾಯ ಮಾಡುವ ದಿಸೆಯಲ್ಲಿಯೂ ನಿಧಿ ಸಂಗ್ರಹಿಸುವ ನಿರ್ಧಾರದ ಕುರಿತು ಚರ್ಚೆ ಮಾಡಿ, ಸಮ್ಮತಿ ಸೂಚಿಸಿದ್ದಾರೆ.
ನಾಲ್ಕು ವರ್ಷಗಳ ಪ್ರಯತ್ನ – 1997-98 ನೇ ಸಾಲಿನ ಕಲಾ ವಿಭಾಗದ ವಿದ್ಯಾರ್ಥಿಗಳಾದ ಗವಿಮಠದ 18 ನೇ ಪೀಠಾಧಿಪತಿಗಳ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಗೆಳೆಯರ ಬಳಗವನ್ನು ಸೇರಿಸಬೇಕು, ಸ್ನೇಹ ಸಮ್ಮಿಲನ ಮಾಡಬೇಕು ಎಂದು ಕಳೆದ ನಾಲ್ಕು ವರ್ಷಗಳ ಪ್ರಯತ್ನ ಮಾಡಲಾಗಿದೆ.
25 ವರ್ಷಗಳ ಬಳಿಕ ಗೆಳೆಯರನ್ನು ಒಂದೆಡೆ ಸೇರಿಸಲು ಶ್ರೀಶೈಲ ಅಳವಂಡಿ, ಕನಕಪ್ಪ ಉಪ್ಪಾರ, ಶಂಭು ಪಾಟೀಲ್, ಗುರು ಬೂದಗುಂಪಾ, ರಾಜು ಕಬಾಡೆ, ಗಿರಿಜಾ ಮಲ್ಲಿಗಿಹಾಳ, ರಾಚಮ್ಮ, ವಿಜಯಲಕ್ಷ್ಮಿ ಬಳ್ಳೊಳ್ಳಿ, ಸುಮಂಗಲಾ ಸಜ್ಜನ, ಚಂದ್ರ ಕವಲೂರು ಅವರು ಸೇರಿದಂತೆ ಅನೇಕರು ನಾಲ್ಕು ವರ್ಷಗಳಿಂದ ಶ್ರಮಿಸಿದ್ದಾರೆ.
ಅವರ ಮೊಬೈಲ್ ಸಂಖ್ಯೆಯನ್ನ ಸಂಗ್ರಿಸುವುದರಿಂದ ಹಿಡಿದು, ಅವರನ್ನು ಖುದ್ದು ಸಂಪರ್ಕ ಮಾಡಿ ಕರೆತಂದಿದ್ದಾರೆ. ಅದೇ ಮಾದರಿಯಲ್ಲಿ ಗುರುಗಳ ಸಂಪರ್ಕಕ್ಕೂ ಪ್ರಯತ್ನಿಸಿ, ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಪದವಿ ವಿದ್ಯಾರ್ಥಿಗಳು 25 ವರ್ಷಗಳ ಬಳಿಕ ಸೇರುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಕಳೆದ ನಾಲ್ಕು ವರ್ಷಗಳ ಪ್ರಯತ್ನದ ಫಲವಾಗಿ ಈಗ ಒಗ್ಗೂಡುವಂತೆ ಆಯಿತು.ಎಲ್ಲರೂ ಸೇರಿ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಮಾಡಿದ್ದು ಸಂತೋಷವನ್ನು ಮಾಡಿದೆ. ಬಂದವರೆಲ್ಲಾ ಭಾವುಕರಾಗಿ, ಸಂತಸವನ್ನು ಹಂಚಿಕೊಂಡಿದ್ದಾರೆ
– ಶ್ರೀಶೈಲ ಅಳವಂಡಿ
ಕೇವಲ ಸ್ನೇಹ ಸಮ್ಮಿಲನ ಮತ್ತು ಗುರುವಂದನೆ ಮಾಡಿ ಕೈ ಚಲ್ಲುವುದು ಬೇಡ. ಇದನ್ನು ನಿರಂತರವಾಗಿ ಸಂಘಟನೆ ಮಾಡುವುದು ಹಾಗೂ ನಮ್ಮ ಸ್ನೇಹಿತರೇ ಕಷ್ಟದಲ್ಲಿದ್ದವರಿಗೆ ನೆರವಾಗುವ ದಿಸೆಯಲ್ಲಿ ಸಹಕಾರ ಸಂಘವನ್ನು ಸ್ಥಾಪಿಸೋಣ
– ಚಂದ್ರಶೇಖರ ಕವಲೂರು
26ಕೆಪಿಎಲ್24 25 ವರ್ಷಗಳ ಬಳಿಕ ಸೇರಿಸುವ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ 1997-98 ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಸೇರಿರುವ ಗೆಳೆಯರ ಬಳಗ