
ಕೊಪ್ಪಳದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ
ಇಂದು ಶ್ರೀ ತುಳಸಿ ವಿವಾಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ನಗರದ ಪ್ರಶಾಂತ ಬಡಾವಣೆಯ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಇಂದು ಡಿ. 24 ಶುಕ್ರವಾರ ಸಂಜೆ ಗೊಧೂಳಿ ಮೂಹುರ್ತದಲ್ಲಿ ಸಾಯಂಕಾಲ ೬ ಕ್ಕೆ ಶ್ರೀ ತುಳಸಿ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನ ಕೊಪ್ಪಳದ ವತಿಯಿಂದ ಜರುಗಲಿದೆ.
ಈ ವಿವಾಹ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ – ವಿಧಾನ ನದಂತೆ ಪುರೋಹಿತರು ತುಳಸಿ ವಿವಾಹ ಆಯೋಜಿಸಲಾಗಿದೆ.
ವರನ ಪಕ್ಷ ; ಶ್ರೀಮತಿ ಮತ್ತು ಶ್ರೀ ಗುರುನಾಥಭಟ್ಟ ಗೊವಿಂದಭಟ್ಟ ಕಣವಿ ಬಹಿಸಲಿದ್ದು .
ಕನ್ಯಾಪಕ್ಷ ; ಶ್ರೀ ಮತಿ ಮತ್ತು ಶ್ರೀ ಚಿದಂಬರಬ್ಬಟ್ಟ ಪಂಪಾಪತಿಭಟ್ಟ ವೈದ್ಯ ವಹಿಸಲಿದ್ದು ಭಕ್ತರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ಶ್ರೀ ವಿಠ್ಠಲಕೃಷ್ಣ ದೇವಸ್ಥಾನ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.