
ಎನ್.ಜಿ.ಓ ಕಾಲೋನಿಯ ಈಶ್ವರ ದೇವಸ್ಥಾನದ ವಾರ್ಷಿಕೋತ್ಸವ – ಗವಿ ಶ್ರೀ ಚಾಲನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26 – ಎನ್.ಜಿ.ಓ ಕಾಲೋನಿಯ ಈಶ್ವರ ದೇವಸ್ಥಾನದ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿತು. ವಾರ್ಷಿಕೋತ್ಸವ ನಿಮಿತ್ಯ ಎರ್ಪಡಿಸಿದ್ದ ಪ್ರಸಾದಕ್ಕೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು. ಸಿದ್ಧೇಶ್ವರ ಮಹಾಸ್ವಾಮಿಗಳು ಹಿರೇಮಠ ಮೈನಳ್ಳಿ ಇವರು ರುದ್ರಾಭಿಷೇಕ ಪೂಜೆ ಸಲ್ಲಿಸಿದರು.
ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಶ್ರಿದೇವಿ ಪಾಟೀಲ, ದ್ವಿತೀಯ ಸೌಮ್ಯಶ್ರೀ ಅಶ್ರೀತ್, ತೃತೀಯ ಸುಧಾ ಶಿವಪುರ, ಮಕ್ಕಳು ಆಸಕ್ತಿಯಿಂದ ಓನಕೆ ಒಬವ್ವ, ಕೊರವಂಜಿ, ಬುಡಬುಡಕಿ, ಕಿತ್ತೂರ ಚೆನ್ನಮ್ಮ, ರೈತ, ಭಗತ್ ಸಿಂಗ್, ಶಿಕ್ಷಕ, ಸೈನಿಕ, ಹೀಗೆ ವಿವಿಧ ವಷಭೂಷಣ ತೊಟ್ಟು ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ಚಿಣ್ಣರು ಪಾಲ್ಗೊಂಡರು. ಪ್ರಥಮ ದಯಾ ಹೆಗಡೆ, ದ್ವಿತೀಯ ಲಕ್ಷ್ಮೀ ದಿವಟರ್, ತೃತೀಯ ಸೃಜನ್ ಶಿವಪುರ, ವಚನ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಶ್ರೇಯಸ್, ದ್ವಿತೀಯ ಸಮನ್ವಿತಾ ಮಠಪತಿ, ತೃತೀಯ ಅಕ್ಷರ ಮೇದಾರ, ಭಕ್ತಿಗೀತೆ ಸ್ಪರ್ಧೆ ವಿಭಾಗದಲ್ಲಿ ಪ್ರಥಮ ನಿಹಾರಿಕಾ ನಾರಾಯಣಸ್ವಾಮಿ, ದ್ವಿತೀಯ ಅನುಶ್ರೀ ಅಶ್ರೀತ್, ತೃತೀಯ ಪ್ರತಿಭಾ ಜಹಗೀರದಾರ,
ಲಚ್ಚಣ್ಣ ಹಳೇಪೇಟೆ, ಕೃಷ್ಣ ಸೊರಟೂರ, ರೇಖಾ ಸವಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.ಕಾಲೋನಿಯಲ್ಲಿ ಕಳೆದ ವರ್ಷ ನಿರ್ಮಾಣವಾದ ಈ ದೇವಸ್ಥಾನ ಮಕ್ಕಳಲ್ಲಿ ಹಾಗೂ ನಿಮ್ಮೆಲ್ಲರಿಗೂ ಸಕಾರಾತ್ಮಕ ಆಲೋಚನೆ ಬಿತ್ತುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಗುತ್ತಿರುವುದು ಸ್ವಾಗತಾರ್ಹ ಎಂದು ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಬೃಹನ್ಮಠ ಹೆಬ್ಬಾಳ ಇವರು ಆಶೀರ್ವನ ನೀಡಿದರು. ಇದೇ ಸಂದರ್ಭದಲ್ಲಿ ಈಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರಾದ ವೀರಣ್ಣ ಚಾಕಲಬ್ಬಿ ದೇವಸ್ಥಾನದ ನಿರ್ಮಾಣದ ಖರ್ಚಿನ ವಿವರಗಳನ್ನು ಸಾರ್ವಜನಿಕವಾಗಿ ಒಪ್ಪಿಸಲಾಯಿತು
ರಂಗೋಲಿ ಸ್ಪರ್ಧೆಯ ನಿರ್ಣಾಯಕರಾಗಿ ಮಲ್ಲಮ್ಮ ಗತ್ತಿ,ಕಸ್ತೂರಿ ಚಿಕರೆಡ್ಡಿ, ರತ್ನಾ ಅಳವಂಡಿ, ಮಕ್ಕಳ ವೇಷ ಭೂಷಣ ಸ್ಪರ್ಧೆಯ ನಿರ್ಣಾಯಕರಾಗಿ ಲಲಿತಾ ನಾಲ್ವಾಡ, ಶುಭ ಸಂತೋಷ, ವಚನ ಗಾಯನ ಹಾಗೂ ಭಕ್ತಿಗೀತೆ ಸ್ಪರ್ಧೆಯ ನಿರ್ಣಾಯಕರಾಗಿ ರೇಖಾ ಸವಡಿ, ಶಿಲ್ಪಾ ಪುರಾಣಿಕಮಠ ಕಾರ್ಯನಿರ್ವಹಿಸಿದರು.
*ಶಿವಶಕ್ತಿ ಮಹಿಳಾ ಮಂಡಳಿ ರಚನೆ ಪದಾಧಿಕಾರಿಗಳ ಆಯ್ಕೆ*
ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಶಿವಶಕ್ತಿ ಮಹಿಳಾ ಮಂಡಳಿ ಕೊಪ್ಪಳ ರಚನೆಯಾಗಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷೆ ಸುಮಿತ್ರ ಎಸ್.ಪುರಾಣಿಕಮಠ, ಅಧ್ಯಕ್ಷೆ ಗೌರಮ್ಮ ಎಸ್.ಗಾರವಾಡಮಠ, ಉಪಾಧ್ಯಕ್ಷರು ಅನ್ನಪೂರ್ಣ ಮಂಡಸೊಪ್ಪಿ, ಗಂಗಮ್ಮ ಪಾಟೀಲ ಗೌರವ ಕಾರ್ಯದರ್ಶಿ ರೇಣುಕಾ ಎನ್.ಡೊಳ್ಳಿನ ಪ್ರಧಾನ ಕಾರ್ಯದರ್ಶಿ ರೇಣುಕಾ ದಿವಟರ್, ಖಚಾಂಚಿ ಶಿಲ್ಪಾರಾಣಿ ಪುರಾಣಿಕಮಠ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮೀ ತಳವಾರ, ಗೀತಾ ಗಾರ್ಗಿ, ಶುಭಾ ಹೀರೆಮಠ, ಲಕ್ಷ್ಮೀ ಹಿರೇಗೌಡ್ರ, ಸಹನಾ ಪಾಟೀಲ, ವಿಜಯಲಕ್ಷ್ಮೀ ಪಾಟೀಲ, ಭಾಗ್ಯಶ್ರೀ ಕುಲಕರ್ಣಿ, ಸುವರ್ಣ, ಸುಜಾತ ಒಕ್ಕಳದ, ನಿರ್ಮಲಾ ಪೂಜಾರ, ಕಸ್ತೂರಿ ಚಿಕರೆಡ್ಡಿ ಆಯ್ಕೆಯಾದರು.
ಶಿವರಾತ್ರಿ ನಿಮಿತ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಂಜೆ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು
ಕಾರ್ಯಕ್ರಮದಲ್ಲಿ ರೇವಯ್ಯ ಪೂಜಾರ, ರವಿ ವಾಲ್ಮೀಕಿ, ಸಂಗಪ್ಪ ಹಾಲ್ಯಾಳ, ಪಾಲಾಕ್ಷಪ್ಪ, ನಾಗರಾಜನಾಯಕ ಡೊಳ್ಳಿನ, ರಾಘವೇಂದ್ರ ದೇಶಪಾಂಡೆ, ಮಲ್ಲಿಕಾರ್ಜುನ ಕಾರವಾಡಮಠ, ಮತ್ತಿತ್ತರರು ಹಾಜರಿದ್ದರು ಪ್ರಾಸ್ತಾವಿಕ ನುಡಿ ರಾಜಶೇಖರ ಪುರಾಣಿಕಮಠ, ಪ್ರಾರ್ಥನೆ ಶಾಂತಾ ಬಸವರಾಜ ಗೌರಿಮಠ, ಸ್ವಾಗತ ಗಂಗಾಧರ ಖಾನಾಪುರ, ಬಸವರಾಜ ಸವಡಿ ನಿರೂಪಿಸಿದರು.