
ಜನವರಿ ೧೨ ರಿಂದ ೧೪ರ ವರೆಗೆ
೨೦ನೇ ಇಟಗಿ ಉತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೫- ಇಟಗಿ ಉತ್ಸವದ ಸಾಂಸ್ಕöÈತಿಕ ಸಮಿತಿ ಮತ್ತು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಸಹಯೋಗದಲ್ಲಿ ಕಳೆದ ೧೯ ವರ್ಷಗಳಿಂದಲೂ ಇಟಗಿ ಜಿಲ್ಲಾ ಉತ್ಸವವನ್ನು ಮಾಡುತ್ತಾ ಬಂದಿದೆ. ಬರುವ ಜನವರಿ ೧೨ ರಿಂದ ೧೪ರ ವರೆಗೆ ಇಟಗಿ ಮಹದೇವ ದಂಡನಾಯಕ ವೇದಿಕೆಯಲ್ಲಿ ೨೦ನೇ ಬಾರಿಗೆ ಇಟಗಿ ಉತ್ಸವವನ್ನು ನಡೆಸಲಿದೆ ಎಂದು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ತಿಳಿಸಿದರು.
ಅವರು ಇಟಗಿಯಲ್ಲಿ ಉತ್ಸವದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿ ಮಕ್ಕಳ ಸಮ್ಮೇಳನ, ಮಹಿಳಾ ಸಮ್ಮೇಳನ, ಇಟಗಿ ಜನಪರ ಜಾತ್ರೆ ಜರುಗಲಿದ್ದು, ಸಮ್ಮೇಳನದಲ್ಲಿ ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಕೊಪ್ಪಳ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾತಂಡಗಳು, ಕವಿಗಳು, ಚಿಂತಕರು ಆಗಮಿಸಿಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಬಿ.ಎಂ ಹಳ್ಳಿ ಅವರು ಮಾತನಾಡಿ, ಉತ್ಸವಕ್ಕೆ ಬರುವಂತಹ ಕಲಾವಿದರಿಗೆ ಅತಿಥಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಆಸಕ್ತ ಮನಸ್ಸುಗಳು ಮಾಡುವುದಾಗಿ ತಿಳಿಸಿದರು. ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಜಿ.ಎಸ್.ಗೋನಾಳರವರು ಪ್ರಾಸ್ತಾವಿಕವಾಗಿ ಮಾತನಾಡಿ, ೯೦೦ ವರ್ಷಗಳ ಐತಿಹಾಸಿಕ ದೇವಾಲಯಗಳ ಚಕ್ರವರ್ತಿ ಮಹಾದೇವ ದೇವಾಲಯ ಆವರಣದಲ್ಲಿ ೧೯ ವರ್ಷಗಳ ಕಾಲ ನಾವು ಇಟಗಿ ಉತ್ಸವವನ್ನು ಸಂಭ್ರಮದಿAದ ಆಚರಿಸುತ್ತ ಬಂದಿದ್ದೇವೆ. ಈಗಾಗಲೇ ೨೫ ಸಾವಿರ ಕಲಾವಿದರಿಗೆ, ವಿದ್ಯಾರ್ಥಿಗಳಿಗೆ, ಕವಿಗಳಿಗೆ, ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಗಿದೆ, ಅಲ್ಲದೇ ಸಾಧರಿಕರಿಗೆ ಪುರಸ್ಕಾರಗಳನ್ನು ಮಾಡಲಾಗಿದೆ. ಈ ಐತಿಹಾಸಿಕ ಇಟಗಿ ಉತ್ಸವದ ಯಶಸ್ವಿಗೆ ದಾನಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ಇಟಗಿ ಗ್ರಾಮಸ್ಥರು ಸಹಕಾರ ನೀಡುತ್ತಾ ಬಂದಿದ್ದಾರೆ. ಇಟಗಿ ಉತ್ಸವದ ಜೊತೆಗೆ ಇಟಗಿಯ ಭಾಗದಲ್ಲಿ ಕುಡಿಯುವ ನೀರು, ರಸ್ತೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಪುಷ್ಕರಿಣಿ ಅಭಿವೃದ್ಧಿ ಕೆಲಸಗಳು ಶೀಘ್ರವಾಗಿ ಆಗಬೇಕಾಗಿದ್ದು ಜನಪ್ರತಿನಿಧಿಗಳು ಇತ್ತ ಕಡೆ ವಿಶೇಷವಾಗಿ ಗಮನಹರಿಸಬೇಕಿದೆ ಎಂದು ಮಾತನಾಡಿದರು. ಅಲ್ಲದೇ ನಾಗರಾಜ ಉಮಚಿಗಿ, ಎನ್.ಸಿ.ಪಣಿ, ಎಂ.ಬಿ. ಅಳವಂಡಿ, ಸೇರಿದಂತೆ ಅನೇಕರು ಸಭೆ ಕುರಿತು ಮಾತನಾಡಿದರು.
ಸಭೆಯಲ್ಲಿ ಶರಣಪ್ಪ ಹಾದಿ, ರಾಮಣ್ಣ ಬಾರಕೇರ, ಉಪೇಂದ್ರ, ನಿಂಗಾ ಭಟ್ ಪೂಜಾರ, ರುದ್ರಮನಿ ಮಠಪತಿ, ಮಂಜುನಾಥ ಕೋರಿ, ಹಿರೇಲಿಂಗಣ್ಣನವರ್, ಚಿನ್ನಪ್ಪ ಗುಳಗಣ್ಣನವರ ಸೇರಿದಂತೆ ಅನೇಕರು ಇದ್ದರು.ಸ್ವಾಗತವನ್ನು ಉಮೇಶ ಸುರ್ವೆ, ವಂದನಾರ್ಪಣೆಯನ್ನು ಮಹೇಶ ದೊಡ್ಡಮನಿ ಮಾಡಿದರು.