WhatsApp Image 2024-02-27 at 12.45.38 PM

ಪತ್ರಕರ್ತರ ಸಂಘದ ಹೊಸ ಸದಸ್ಯತ್ವಕ್ಕೆ ಹಾಗೂ ನವೀಕರಣಕ್ಕೆ ಅರ್ಜಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,27- ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸ ಸದಸ್ಯತ್ವಕ್ಕೆ ಹಾಗೂ ನವೀಕರಣಕ್ಕೆ ಎರಡು ದಿನಗಳ ಕಾಲ ಅರ್ಜಿ ಸ್ವೀಕರಿಸಲಾಗುವುದು ಎಂದು ಕನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಅವರು ತಿಳಿಸಿದ್ದಾರೆ.

ನಮ್ಮ ಸದಸ್ಯರು ಹಾಗೂ ಹೊಸದಾಗಿ ಸೇರ್ಪಡೆ ಬಯಸುವವರು, ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಅರ್ಜಿ ಸಲ್ಲಿಸಬಹುದು. ಎರಡು ದಿನಗಳ ಕಾಲ ಬೆಳಿಗ್ಗೆ 11 ರಿಂದ ಮ.1 ರ ರವರೆಗೆ ಸಮಯ ನಿಗಧಿಪಡಿಸಲಾಗಿದೆ. ಈಗಾಗಲೇ ಸುಮಾರು ಜನರು ಆಗಮಿಸಿ ಅರ್ಜಿ ಸಲ್ಲಿಸಿದ್ದು, ಉಳಿದ ನಮ್ಮ ಸದಸ್ಯರು ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಪ್ರಾರಂಭದ ದಿನ, ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಎನ್.ಗುರುಶಾಂತ್, ಕಾರ್ಯಕಾರಣಿ ಸದಸ್ಯರಾದ ಎಂ. ಜಂಬುನಾಥ್, ವೆಂಕಟೇಶ ದೇಸಾಯಿ, ಹಿರಿಯ ಪತ್ರಕರ್ತರಾದ ಹನುಮೇಶ್ ರಾವ್ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!