೪

                   ಕೇಂದ್ರ ಸರ್ಕಾರದ 9 ವರ್ಷದ, ಸಾಧನೆಗಳ ಅನಾವರಣ, ಛಾಯಾಚಿತ್ರ ಪ್ರದರ್ಶನ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೯- ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆಗಳು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸ್ವಚ್ಛ ಭಾರತ ಹಾಗೂ ಇನ್ನಿತರ ಯುವ ಜನಗಳ ಕುರಿತು ಬಳ್ಳಾರಿ ಕ್ಷೇತ್ರಿಯ ಕೇಂದ್ರ ಸಂಭವನ ಇಲಾಖೆ ವತಿಯಿಂದ ಇಲ್ಲಿನ ವೀರಶೈವ ಪದವಿ ಪೂರ್ವ ಕಾಲೇಜು ಮಂಗಳದಲ್ಲಿ ಹಿಂದಿನಿಂದ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ.

ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಮಾಜಿ ಮಹಾಪೌರರು ಆದ ಎಂ ರಾಜೇಶ್ವರ್ ಅವರು ಚಾಲನೆ ನೀಡಿದರು. ಹೈದರಾಬಾದಿನ ದೂರದರ್ಶನ ಕೇಂದ್ರದ ನಿವೃತ್ತ ಉಪ ನಿರ್ದೇಶಕ ಡಾಕ್ಟರ್ ಕೆ ಸುಧಾಕರ್ ಅವರು ಅತಿಥಿ ಉಪನ್ಯಾಸಕರಾಗಿ ಮಾತನಾಡಿ ಕೃಷಿ ಸಿಂಚಹಿ ಯೋಜನೆ, ಸಾಯಿಲ್ ಆರೋಗ್ಯ ಕಾರ್ಡ್, ನೀಮ್ ಕುಚೋಡ್ ಯೂರಿಯಾ ಮೇರಿ ಮಾರಿ ಮೇರಾ ದೇಶ, ಶೇಕ್ ಭಾರತ್ ಶ್ರೇಷ್ಠ ಭಾರತ ಆಯುಷ್ಮಾನ್ ಭಾರತ್ ಒಂದು ರಾಷ್ಟ್ರ ಒಂದು ಮಾರುಕಟ್ಟೆ ಒಂದು ತೆರಿಗೆ ಕೃಷಿ ನಿರ್ವಹಣೆಯಲ್ಲಿ ಪರ್ಯಾಯ ಪೋಷಕಾಂಶಗಳ ಬಳ ಕೆಗೆ ಉತ್ತೇಜನ ನೀಡುವ ಪಿಎಮ್ ಪ್ರಣಾಮ್ ಯೋಜನೆಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿಲಾಗಿದ್ದು, ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಗೀತ ಮತ್ತು ನಾಟಕ ವಿಭಾಗದ ಕಲಾವಿದರಿಂದ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಿಸ್ಟಿ ರುದ್ರಪ್ಪ, ವೀರಶೈವ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್, ಪಿಎಸ್ ಗೌತಮ್, ಆಡಳಿತ ಮಂಡಳಿಯ ಸದಸ್ಯರು, ಬಳ್ಳಾರಿ ಕೇಂದ್ರ ಸಮ್ಬಹನ ಇಲಾಖೆಯ ರಾಮಕೃಷ್ಣ ಹಾಗೂ ಶಿವಮೊಗ್ಗ ಕೇಂದ್ರದ ಸಮ್ಮಹನ ಇಲಾಖೆಯ ಲಕ್ಷ್ಮಿಕಾಂತ ಮತ್ತಿತರರು ಉಪಸ್ಥಿತರಿದ್ದರು. ಮೂರು ದಿನಗಳ ಕಾಲ ನಗರದ ಕಂಟ್ರೋಲ್ಮೆಂಟ್ ನ ವೀರಶೈವ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿರುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕುರಿತು ನವಂಬರ್ 10ರವರೆಗೆ ಸಾರ್ವಜನಿಕರು ವೀಕ್ಷಿಸಬಹುದು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!