WhatsApp Image 2024-06-05 at 6.28.14 PM

ಕೌಶಲ್ಯ ತರಬೇತಿ ಕಾರ್ಯಾಗಾರ

ಬೋಧಕರ ಮೇಲಿದೆ ವಿದ್ಯಾರ್ಥಿಗಳ ಬದುಕು-ಭವಿಷ್ಯ ರೂಪಿಸುವ ಹೊಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 5- ಸರಕಾರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಬದುಕು-ಭವಿಷ್ಯ ರೂಪಿಸುವ ಹೊಣೆ ಬೋಧಕರ ಹೆಗಲಿಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಕಲಬುರಗಿ ಪ್ರಾದೇಶಿಕ ಕಚೇರಿಯ ಜಂಟೀ ನಿರ್ದೇಶಕ ಪ್ರೊ.ಗೊಳ್ಳೆ ಶಿವಶರಣ. ಬಿ. ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬೆಂಗಳೂರಿನ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ವಾಧ್ವಾನಿ ಫೌಂಡೇಷನ್ ಸಹಭಾಗಿತ್ವದಲ್ಲಿ ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿ‌ನ ಪ್ಲೇಸ್‌ಮೆಂಟ್ ಸೆಲ್ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಎರಡು ದಿನಗಳ ಆರ್ಟಿಫಿಸಿಯಲ್ ಇಂಟಲಿಜೆನ್ಸಿ ಆಧಾರಿತ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಕಾಲೇಜುಗಳ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದು, ಬೋಧಕರೆಲ್ಲ ತಂತ್ರಜ್ಞಾನ ಅರಿಯಬೇಕಿದೆ. ಅದರಲ್ಲೂ ಯುವ ಬೋಧಕರು ತಂತ್ರಜ್ಞಾನ ಅಳವಡಿಕೆಗೆ ಮುಂದಾಗಬೇಕು. ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗಿಂತ ಸರಕಾರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಕಡಿಮೆ ಇಲ್ಲದಂತೆ ಪರಿಣತಿ ಸಾಧಿಸಬೇಕಿದೆ ಎಂದು ಅವರು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿ ಮಾತನಾಡಿ, ಕೃತಕ ಬುದ್ಧಿಮತ್ತೆಯ. ಪರಿಕಲ್ಪನೆ, ಉಗಮ, ವಿಕಾಸ ಹಾಗೂ ಉದ್ಯೋಗಾವಕಾಶಗಳ ಕುರಿತು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಕಲಬುರಗಿ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ರಾಜೇಂದ್ರ ಸಿಂಧೆ, ವಿಶೇಷ ಅಧಿಕಾರಿಗಳಾದ ಡಾ.ಬಿ.ಸರೋಜಾ, ಡಾ.ಸೂರ್ಯಕಾಂತ ಉಮ್ಮಾಪುರೆ ಭಾಗವಹಿಸಿದ್ದರು. ವಾಧ್ವಾನಿ ಫೌಂಡೇಶನ್‌ನ ಮಾಸ್ಟರ್ ಟ್ರೇನರ್ ಕು.ಸ್ವಾತಿ ಪುತ್ರನ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಯಾದ ಸಂತೋಷಿಕುಮಾರಿ, ಶಿವಬಸಪ್ಪ ಮಸ್ಕಿ, ಗೋಣಿಬಸಪ್ಪ, ಮಹಮ್ಮದ್ ಶಫಿ, ಬಸವರಾಜ ಕರುಗಲ್, ಶಿವರಾಮ್, ಸ್ಥಾನಿಕರಣ ಕೋಶ ವಿಭಾಗ ಸಂಚಾಲಕ ಶಿವನಾಥ್, ಡಾ. ಸಿ. ಬಿ ಚಿಲ್ಕರಾಗಿ, ತಳಬಾಳ ವಸತಿ ಪದವಿ ಕಾಲೇಜಿನ ಪ್ರಾಚಾರ್ಯ ಯಮನೂರಪ್ಪ, ಮಹಾಂತೇಶ ಮೈನಳ್ಳಿ, ರವಿಕಿರಣ್, ಅನುಷಾ, ಜಯಪ್ರಕಾಶ್ ಬಿರಾದಾರ್, ಸುರೇಶ, ಅಶೋಕ, ರಮೇಶ್, ಹಸನ್ ಇತರರು ಇದ್ದರು.

ಡಾ.ಭಾಗ್ಯಜ್ಯೋತಿ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಚೈತ್ರಾ ಹಾಗೂ ಅಕ್ಷತಾ ಪ್ರಾರ್ಥಿಸಿದರು. ಜ್ಞಾನೇಶ್ವರ ಪತ್ತಾರ ಸ್ವಾಗತಿಸಿದರು. ಡಾ.ಪ್ರಕಾಶ್ ಬಳ್ಳಾರಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!