ಮನೆ ಸಾಲ ವ್ಯಕ್ತಿ ಆತ್ಮಹತ್ಯೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 21- ಸಾಲದ ಬಾದೆಯಿಂದ ತಾಳದೆ ಕೊಪ್ಪಳ ತಾಲೂಕಿನ ಇಂದರಿಗಿ ಗ್ರಾಮದ ದುರ್ಗಪ್ಪ ಹಂಚಿನಾಳ‌(48) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೋಮವಾರ ಆತ್ಮಹತ್ಯೆ ಮಾಡಿ ಕೊಂಡಿದ್ದು ಮೃತನು ಇರಕಲ್ ಗಡಾದ ಗಂಗಾ ಕಾವೇರಿ ಬ್ಯಾಂಕಿನಲ್ಲಿ ಮನೆ ಕಟ್ಟುವ ಸಲುವಾಗಿ ಒಂದು ಲಕ್ಷ‌ ರೂ. ಸಾಲ ಮಾಡಿಕೊಂಡಿದ್ದಾನೆ. 50 ಸಾವಿರ ರೂ. ಮರು ಪಾವತಿ ಮಾಡಿದ್ದು, ಬಾಕಿ 50 ಸಾವಿರ ರೂ. ಕಟ್ಟಬೇಕಿತ್ತು ಎನ್ನಲಾಗಿದೆ.
ಸಾಲ ಇರುವುದರಿಂದ ಮನನೊಂದು ಮಾನಸಿಕವಾಗಿ ಕುಗ್ಗಿದ್ದ. ಕಳೆದ ಕೇಲ ದಿನಗಳಿಂದ ಇದೇ ಚಿಂತೆಯಲ್ಲಿದ್ದ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣದ ಕುರಿತು ಮೃತನ ಪತ್ನಿ ನೀಡಿದ ದೂರಿನ ಅನ್ವಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!