cfb8b39d-72eb-46ec-beae-88a4d64944cd

ಲಾರಿಗಳ ಅಪಘಾತ

 ಚಾಲಕನ ಪಾರು

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೫- ಜಿಲ್ಲೆಯ  ಕುಕನೂರು ತಾಲೂಕಿನ ತಳಕಲ್​ ಬನ್ನಿಕೊಪ್ಪ ಗ್ರಾಮಗಳ ಎರಡು ಲಾರಿಗಳ ನಡುವೆ  ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.

ಸೋಮವಾರ  ಈ ಘಟನೆ ಜರುಗಿದ್ದುಎನ್​ಎಚ್​ 60ರಲ್ಲಿ ಅಪಘಾತ ನಡೆದಿದೆ  ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ತಮಿಳುನಾಡು ಮೂಲದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ.

ಚಾಲಕ  ಪಾರು:  ಅಪಘಾತದಲ್ಲಿ ಲಾರಿ ಡಿಕ್ಕಿ ರಭಸಕ್ಕೆ  ಮುಂಭಾಗ ನುಜ್ಜು ನುಜ್ಜಾಗಿದೆ.ಕ್ಯಾಬಿನ್​ನಲ್ಲಿ ಸಿಲುಕಿದ್ದ ಚಾಲಕ ಹೊರ ಬಾರದೆ ಪ್ರಾಣಪಾಯಕ್ಕೆ ಸಿಲುಕಿದ್ದ. ತಕ್ಷಣ ಸಹಾಯಕ್ಕೆ ಧಾವಿಸಿದ ಅಗ್ನಿಶಾಮಕ ಅಧಿಕಾರಿಗಳಾದ ಶಿವಕುಮಾರ್​ ಬಾಗೇವಾಡಿ, ವಿನಾಯಕ, ತೇಜಸ್ವಿಕುಮಾರ, ಫಕೀರಪ್ಪ, ಅಮರೇಶ್​, ಚೇತನ್​ ಚಾಲಕನಿಗೆ ಧೈರ್ಯ ತುಂಬಿ, ನೀರು ಕುಡಿಸಿ ಸಮಾಧಾನಿಸಿದರು.
ಟೂಲ್​ ಕಿಟ್​ ಬಳಸಿ ಒಂದೂವರೆ ಗಂಟೆ ಕಾರ್ಯಾರಣೆ ನಡೆಸಿ ಚಾಲಕ ಗಣೇಶ ಎಂಬಾತನ ಪ್ರಾಣ ರಸಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾಲುಗಳು ಮುರಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ  ಎಂದು ತಿಳಿದು ಬಂದಿದೆ ಕುಕನೂರ ಠಾಣೆಯಲ್ಲಿ ದೂರು ದಾಖಲಾಗಿದೆ.

 

Leave a Reply

Your email address will not be published. Required fields are marked *

error: Content is protected !!