
ಲಿಂಗಾಯತ ಮಠಮಾನ್ಯಗಳ ಕಾಯಕ
ಹೇಳುವಲ್ಲಿ ಲಿಂಗಾಯತ ರಾಜಕಾರಣಿಗಳು
ಸೋಲು:ಶ್ರೀ.ನಿಜಗುಣಾನಂದ ಮಹಾಸ್ವಾಮಿಗಳು
ಕರುನಾಡ ಬೆಳಗು ಸುದ್ದಿ
ಬೆಳಗಾವಿ, ೦೯- ಮನುಷ್ಯತ್ವದ ಧರ್ಮ ಉಳಿಸಿದ ಲಿಂಗಾಯತ ಮಠಮಾನ್ಯಗಳ
ಕಾಯಕ ಹೇಳುವಲ್ಲಿ ಲಿಂಗಾಯತ ರಾಜಕಾರಣಿಗಳು ಸೋಲುತ್ತಿದ್ದಾರೆ ಎಂದು
ಬೈಲೂರು ನಿಷ್ಕಲ ಮಂಟಪದ ಶ್ರೀ.ನಿಜಗುಣಾನಂದ ಮಹಾಸ್ವಾಮಿಗಳು ನುಡಿದರು.
ಅವರು ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳವರ ೧೩೪ ನೇ ಜಯಂತಿ
ಮಹೋತ್ಸವ ಮತ್ತು ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ
ಅಧ್ಯಕ್ಷತೆಯನ್ನು ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಕರ್ನಾಟಕವನ್ನು ಎಂದರೆ ಸಂಕ್ಷಿಪ್ತ ಭಾರತ ಎಂದು ಬಣ್ಣಿಸಿದ ಅವರು ಕರ್ನಾಟಕದ
ಲಿಂಗಾಯತರು ಮಠಾಧೀಶರು ಸ್ವಾಮಿಗಳು ಭಿನ್ನ ವಾಗಿದ್ದಾರೆ ಬಸವಣ್ಣ
ಮನುಷ್ಯತ್ವದ ಬಗ್ಗೆ ಮಾತನಾಡಿದರು ಅದನ್ನು ಜಾರಿಗೆ ತಂದರು ಅವರ
ಪರಂಪರೆಯಲ್ಲಿ ಬಂದ ಸ್ವಾಮಿಗಳು ಮಠಾಧೀಶರು ಅದನ್ನೇ ಅನುಸರಿಸಿದರು,
ಸಾವಿರ ವರ್ಷಗಳ ಹಿಂದೆ ಪರದೇಶದಿಂದ ಇಲ್ಲಿಗೆ ಬಂದ ಸೂಫಿ ಸಂತಾನೋ ಒಬ್ಬ
ಬಸವಣ್ಣನವರ ತತ್ವಗಳಿಗೆ ಮಾರುಹೋಗಿ ಲಿಂಗಾಯತನಾಗಿ ಪರಿವರ್ತಿತನಾದ
ತತ್ವ ನಮ್ಮದು, ಉಳಿದ ರಾಜ್ಯಗಳಲ್ಲಿ ಕಾಲ್ಪನಿಕ ದೇವರ ಬಗ್ಗೆ ಮಾತನಾಡಿದರು
ಕರ್ನಾಟಕದಲ್ಲಿ ಮಾತ್ರ ಲಿಂಗದ ಬದಲು ಜಂಗಮ ನೋಡಿ ಮನುಷ್ಯ ನನ್ನ
ದೇವರಾಗಿ ನೋಡಿದ ಧರ್ಮ ಅದನ್ನು ಮರೆತು ಕೆಲವು ಶಿಕ್ಷಣ ಸಂಸ್ಥೆಗಳು
ತಾತ್ವಿಕ ದೃಷ್ಟಿಯಲ್ಲಿ ಸೋತು ವೈದಿಕ ಅಕ್ಟೋಪಸ್ ಕೈಗೆ
ಸಿಕ್ಕಿಹಾಕಿಕೊಂಡದ್ದು ದುರ್ದೈವ ಎಂದರು.
ಸಮುದಾಯದಿAದ ರಾಷ್ಟ್ರವೇ ಹೊರತು ವೈದಿಕ ಹೋಮ ಹವನ
ಮಂದಿರದಿAದಲ್ಲ ಎಂದ ಅವರು ರಾಷ್ಟ್ರಧರ್ಮ ಲಿಂಗಾಯತ ಧರ್ಮ ಇದನ್ನು
ಅರಿತುಕೊಂಡು ಎಚ್ಚೆತ್ತುಕೊಳ್ಳದಿದ್ದರೆ ಲಿಂಗಾಯತ ಧರ್ಮ ಮತ್ತು
ಪರಂಪರೆ ಉಳಿಯಲಾರದು ಇದರ ಕುರಿತು ಗಂಭೀರ ಚಿಂತನೆಯನ್ನು
ಕೈಗೊಳ್ಳಬೇಕು ಬ್ರಾಹ್ಮಣರಿಂದ ಹಿಡಿದು ದಲಿತರವರಿಗೆ ಅಂದ ವಸ್ತ್ರ ವಿದ್ಯೆ
ಸಂಸ್ಕಾರ ನೀಡಿ ಬೆಳೆಸಿದ ಲಿಂಗಾಯತ ಮಠಗಳು ಉಳಿಯಬೇಕು ಶಿಕ್ಷಣ ಮತ್ತು
ದಾಸೋಹದೊಂದಿಗೆ ತತ್ವವು ಉಳಿಯಬೇಕು ಜಂಗಮವೇ ದೇವರು ಇದನ್ನು
ಅರಿತುಕೊಳ್ಳಬೇಕು, ನಿಯಮಿತವಾಗಿ ಆಚರಿಸಲಾಗುತ್ತಿರುವ ನಮಾಜ್ ನಿಂತ್ರೆ
ಇಸ್ಲಾA ಉಳಿಯದು ,ಪ್ರಾರ್ಥನೆ ನಿಂತ್ರೆ ಕ್ರೈಸ್ತ ಧರ್ಮ ಉಳಿಯದು , ವೈದಿಕ
ಆಚರಣೆಗಳು ನಿಂತ್ರೆ ವೈದಿಕ ಧರ್ಮ ಉಳಿಯದು ಅದೇ ರೀತಿ ಲಿಂಗಾಯತರು
ಲಿAಗಪೂಜೆ ನಿಲ್ಲಿಸಿದರೆ, ತಾತ್ವಿಕವಾಗಿ ಗಟ್ಟಿಯಾಗದಿದ್ರೆ ಲಿಂಗಾಯತ ಧರ್ಮ
ಉಳಿಯದು ಈ ಹಿನ್ನೆಲೆಯಲಿ ಎಲ್ಲರೂ ಗಂಭೀರವಾಗಿ ಚಿಂತನೆ ಮಾಡಿ ದಾಸೋಹ,
ಲಿಂಗ ಪೂಜೆ, ಲಿಂಗಾಯತ ತತ್ವಗಳು, ಉಳಿಯುವಂತೆ ಮಾಡಬೇಕು
ಬೆಳೆಸಬೇಕು ಎಂದವರು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಗದುಗಿನ ತೋಟದಾರ್ಯ ಮಠದ
ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿ
ಬಳಸುವ ಕೈಗಳು ಪ್ರಾಮಾಣಿಕವಾಗಿದ್ದರೆ ನೀಡುವ ಕೈಗಳು
ಬೇಕಾದಷ್ಟು ಎನ್ನುವಂತೆ ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳು ತಮಗಾಗಿ
ಏನನ್ನು ಬಯಸಿದವರಲ್ಲ ಭಕ್ತರು ಪ್ರಸಾದಕ್ಕಂದು ಕರೆದರೆ ನಾನೊಬ್ಬನೇ
ಅಲ್ಲ ನನ್ನೊಂದಿಗೆ ೧೦೦ ಮಕ್ಕಳಿರುತ್ತವೆ ಎಂದು ತಮ್ಮೊಂದಿಗೆ ಮಕ್ಕಳನ್ನು
ಕರೆದುಕೊಂಡು ಪ್ರಸಾದಕ್ಕೆ ಹೊರಡಲು ಸಿದ್ದರಾಗುತ್ತಿದ್ದರು ಅಂತಹ
ಮಾತೃ ಹೃದಯದ ಶ್ರೀಗಳು ಅವರಾಗಿದ್ದರು, ನಾಡಿನ ಮಠಾಧೀಶರಿಗೆ
ಮಾದರಿಯನ್ನುವಂತೆ ಬದುಕಿದವರು ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಬಾಳೆಕುಂದ್ರಿ ಇಂಜಿನಿಯರಿAಗ್ ಕಾಲೇಜಿನ ಪ್ರತಿಭಾನ್ವಿತ
ಮತ್ತು ರ್ಯಾಂಕ್ ವಿಜೇತರಿಗೆ ಪದಕಗಳನ್ನು ಮತ್ತು ಪ್ರಮಾಣ
ಪತ್ರಗಳನ್ನು ನೀಡಿ ಗೌರವಿಸಲಾಯಿತು.ಶ್ರೀಮಠಕ್ಕೆ ಕಾಣಿಕೆ,ದೇಣಿಗೆ ನೀಡಿದ
ಹಲವಾರು ಮಹನೀಯರನ್ನು ಸನ್ಮಾನಿಸಲಾಯಿತು, .ಶ್ರೀಮಠದ ಪಿಯು
ಕಾಲೇಜಿನ ನೂತನ ಕಟ್ಟಡ ನಿರ್ಮಾಣದಲ್ಲಿ ಅತ್ಯತ್ತಮ ಕಾರ್ಯ
ನಿರ್ವಹಿಸಿದವರನ್ನು ಸನ್ಮಾನಿಸಲಾಯಿತು.
ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮಿಗಳ ಕಾರ್ಯವನ್ನು
ಮುಕ್ತ ಕಂಠದಿಂದ ಶ್ಲಾಗಿಸಿದ ಅವರು ಅತ್ಯಂತ ಕಡಿಮೆ ಸಮಯದಲ್ಲಿ ನೂತನ
ಕಾಲೇಜಿನ ಕಟ್ಟಡ ಸೇರಿದಂತೆ ಆಧುನಿಕ ಪರಿಕರಗಳೊಂದಿಗೆ ಶಿಕ್ಷಣ
ಸಂಸ್ಥೆಯನ್ನು ಬೆಳೆಸುತ್ತಿರುವ ಕಾರ್ಯ ಅತ್ಯುತ್ತಮವಾಗಿದೆ ಅದೇ ರೀತಿ ಶಿಕ್ಷಣ
ಸಂಸ್ಥೆಯ ರಥಸಿಬ್ಬಂದಿಯ ಕಾರ್ಯ ಕೂಡ ಬಹಳ ಚೆನ್ನಾಗಿ ನಡೆದಿದೆ ಎಂದರು.
ಶ್ರೀ.ಸಿದ್ದರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ
ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ವಿಭಾಗದ ನೂತನ
ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಾಯಿತು.
ನೇತೃತ್ವವನ್ನು ವಹಿಸಿದ್ದ ಕಲಬುರ್ಗಿ ಗಚ್ಚಿನಮಠದ ಶ್ರೀ. ಶಿವಬಸವ
ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಮ್ಮುಖದಲ್ಲಿ ಕಲಬುರ್ಗಿ ಗದ್ದುಗೆ
ಮಠದ ಶ್ರೀ.ಚರಲಿಂಗ ಮಹಾಸ್ವಾಮಿಗಳು ಮತ್ತು ರುದ್ರಾಕ್ಷಿ ಮಠದ
ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮಿಗಳು ಉಪಸ್ಥಿತರಿದ್ದರು.
ಶ್ರೀ ಮಠದಿಂದ ಕೊಡ ಮಾಡಲಾಗುವ &quoಣ;ಸೇವಾರತ್ನ ಪ್ರಶಸ್ತಿ&quoಣ; ಯನ್ನು
ಗದುಗಿನ ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶ್ರೀ.ಸಿದ್ದಲಿಂಗ ಪಟ್ಟಣಶೆಟ್ಟಿ,
ಗೋಕಾಕದ ಶ್ರೀ.ಸಿ ಕೆ ನಾವಲಗಿ, ಬೈಲಹೊಂಗಲದ ಶ್ರೀ.ಮುರಿಗೆಪ್ಪ ಜಿಗಿಜಿನ್ನಿ,
ಘಟಪ್ರಭಾದ ಶ್ರೀ.ಜಿ.ಎ.ಪತ್ತಾರ , ಗದುಗಿನ ಅನರ್ಘ್ಯ ಸಂಗೀತ ಪಾಠಶಾಲೆಯ
ಶ್ರೀಮತಿ.ವನಮಾಲಾ ಮಾನಶೆಟ್ಟಿ, ಬೆಳಗಾವಿಯ ಶ್ರೀ. ಸಿ.ಎಂ.ಬೂದಿಹಾಳ
ಇವರುಗಳಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ. ಶಿವಬಸವ ಸ್ವಾಮೀಜಿ ಅವರು ಆಲ್ಬಮ್ , ಡಾ. ಎನ್ ಜಿ
ಮಹದೇವಪ್ಪ ವಿರಚಿತ &quoಣ;ಲಿಂಗಾಯಿತ ಧರ್ಮ ಮತ್ತು ದರ್ಶನ&quoಣ; , ಮುದುಗಲ್ಲ
ಸ್ವಾಮೀಜಿ ವಿರಚಿತ,&quoಣ;ಬದುಕು ಮೂರಕ್ಷರದ ಗಂಟು&quoಣ; ಗ್ರಂಥಗಳನ್ನು
ಲೋಕಾರ್ಪಣೆಗೊಳಿಸಲಾಯಿತು.
ಪ್ರೊ.ಎ.ಕೆ.ಪಾಟೀಲ ಸ್ವಾಗತಿಸಿದರು, ಮಂಜುನಾಥ ಶರಣಪ್ಪನವರ್ ಮತ್ತು
ರಾಜಶೇಖರ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು, ಬೆಳಗಾವಿ ಕಾರಂಜಿಮಠದ
ಗುರುಸಿದ್ಧ ಸ್ವಾಮೀಜಿ , ಕಾರಂಜಿ ಮಠದ ಕಿರಿಯ ಸ್ವಾಮೀಜಿ ಶಿವಯೋಗಿ ದೇವರು,
ಶರಣೆ ಕುಮುದಿನಿತಾಯಿ ಮತ್ತು ಶರಣಿ ವಾಗ್ದೇವಿತಾಯಿ, ನಾಡಿನ ವಿವಿಧ
ಮಠಗಳ ಮಠಾಧೀಶರು,ಸಂಸ್ಥೆಯ ಕಾರ್ಯದರ್ಶಿ ಕೆ.ಬಿ.ಹಿರೇಮಠ,
ಡಾ.ಎಫ್.ವಿ.ಮಾನ್ವಿ, ಮಾಜಿ ಮುಖ್ಯ ಸಚೇತಕ ಮಹಾಂಥೆಶ ಕವಟಗಿಮಠ, ವಿಧಾನ
ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಬಸವರಾಜ ರೊಟ್ಟಿ,ಅಶೋಕ
ಮಳಗಲಿ,ಮಾಜಿ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್, ಕೆ.ಬಿ.ಹಿರೇಮಠ,
ಸಿದ್ರಾಮ ರೆಡ್ಡಿ, ಬಿ.ಆರ್.ಪಟಗುಂದಿ, ಉಪಸ್ಥಿತರಿದ್ದರು.