14e1bac1-8ac1-44b4-965d-ee4bb3e32d04

ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಆಕ್ರೋಶ :

ಕಾಂಗ್ರೆಸ್ ನಿಂದ ಅಣಕು ಶವಯಾತ್ರೆ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ (ವಿಜಯನಗರ ), ೧೬-  ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಶ್ರೀ ಸಿದ್ಧರಾಮಯ್ಯರವರನ್ನು ಅವಹೇಳನಕಾರಿಯಾಗಿ ಅಗೌರವದಿಂದ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಅನಂತಕುಮಾರ್ ಹೆಗಡೆಯವರ ಅಣಕು ಶವ ಯಾತ್ರೆಯನ್ನು ನಗರದ ಒಡಕರಾಯ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಪಟಾಕಿ ಸಿಡಿಸುತ್ತ ಅವರ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸುತ್ತಾ, ದಿಕ್ಕಾರ ಕೂಗುತ್ತಾ ತಾಲೂಕು ಕಚೇರಿ ಮುಂದೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾವನೆಗೊಂಡು, ಹೆಗಡೆಯವರ ಭಾವ ಚಿತ್ರವಿರುವ ಬ್ಯಾನರ್ ಗೆ ಕಾಲಿನಿಂದ ತುಳಿದು, ಪೊರಕೆಗಳಿಂದ ಮತ್ತು ಮೊಟ್ಟೆಗಳನ್ನು ಹೊಡೆದು, ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿರಾಜ್ ಶೇಖ್ ನೀವು ಈ ದೇಶವನ್ನು ಗುತ್ತಿಗೆ ತಗೊಂಡಿದ್ದೀರಾ ನಾವೆಲ್ಲರೂ ದೇಶಭಕ್ತರಲ್ವಾ? ರಾಮನ ಭಕ್ತರಲ್ವಾ? ನಾನು ಶಾಸಕನಾಗಿದ್ದಾಗ 200 ದೇವಸ್ಥಾನಗಳನ್ನು ನಮ್ಮ ಕ್ಷೇತ್ರದಲ್ಲಿ ಕಟ್ಟಿಸಿದ್ದೇನೆ. ಇಂದು ಸಿದ್ದರಾಮಯ್ಯನವರ ಯೋಜನೆಗಳಿಂದ ಈ ತಿಂಗಳ ಕೊನೆಯ ವರದಿ ಪ್ರಕಾರ ಒಂದು ಕೋಟಿಗೂ ಅಧಿಕ ಮಹಿಳೆಯರು ಶೇ.90 % ದೇವಸ್ಥಾನಗಳಿಗೆ ಬಸ್ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ.

ಒಂದು ಓಟಿಗಾಗಿ ಜಗಳವನ್ನಿಟ್ಟು ಅಮಾಯಕರ ರಕ್ತವನ್ನು ಹರಿಸಬೇಡಿ, ವಿಜಯನಗರ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರು ಅವಿನಾ ಭಾವದಿಂದಿದ್ದೇವೆ. ಇಂಥ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಸಿದ್ದರಾಮಯ್ಯನ ಅಭಿಮಾನಿಗಳು ರಾಜ್ಯದ ತುಂಬೆಲ್ಲಾಇದ್ದಾರೆ. ಈಗಾಗಲೇ ಜಿಲ್ಲೆಯ ಎಲ್ಲಾ ಬ್ಲಾಕ್ ಗಳಲ್ಲಿ ಪ್ರತಿಭಟಿಸಲು ಕರೆ ನೀಡಿದ್ದೇವೆ. ಚುನಾವಣೆ ಗೋಸ್ಕರ ಈ ರೀತಿ ಅಶಾಂತಿ ಉಂಟು ಮಾಡುವುದನ್ನು ನಿಲ್ಲಿಸಬೇಕು ಎಂದರು.

     ಮನವಿಯಲ್ಲಿ : ಇತ್ತೀಚಿಗೆ ಕುಮುಟಾ ಪಟ್ಟಣದಲ್ಲಿ ಸಂಸದ ಅನಂತಕುಮಾರ್ ಹೆಗಡೆ ರವರು ಮಾತನಾಡುತ್ತಾ, ಮುಖ್ಯಮಂತ್ರಿಗಳ ವಿರುದ್ಧ ಅವಹೇಳನಕಾರ್ಯ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ಜಾತಿ ಜಾತಿಗಳ ಮಧ್ಯೆ ಕೋಮುಗಲಭೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು ಎಂದು ಹೇಳಿಕೆ ನೀಡಿ ರಾಜ್ಯದ ದೇಶದ ಜನರಿಗೆ ನೋವುಂಟು ಮಾಡಿದ್ದರು.
ಚುನಾವಣೆ ಸಮೀಪಿಸಿದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಸಂಸದ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಹೇಳುವುದರ ಜೊತೆಗೆ ಅಶಾಂತಿಗೆ ಕಾರಣರಾಗಿ ಮಾತನಾಡಿರುವ ಹಿನ್ನಲೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅವರು ಸಾರ್ವಜನಿಕವಾಗಿ ಬಹಿರಂಗ ಕ್ಷಮೆಯಾಚಿಸಬೇಕು, ಜೊತೆಗೆ ಸಂಸದ ಸ್ಥಾನದಿಂದ ವಜಾ ಮಾಡಿ, ರಾಜ್ಯದಿಂದ ಗಡಿಪಾರು ಮಾಡಬೇಕೆಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಈ ಮೂಲಕ ಆಗ್ರಹ ಮಾಡುತ್ತಿದೆ.

ಈ ಸಂಧರ್ಭದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಶ್ರೀ ಸಿರಾಜ್ ಶೇಖ್, ಹೆಚ್.ಜಿ. ವಿರೂಪಾಕ್ಷ, ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಡಿ.ವೆಂಕಟರಮಣ, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಖಾಜಾ ಹುಸೇನ್, ರಘ ಕುಮಾರ್, ಎಲ್.ಸಿದ್ದನಗೌಡ, ಸಂಗಪ್ಪ, ಹೆಚ್.ಮಹೇಶ್, ರಾಮಚಂದ್ರ ಗೌಡ, ಪಿ.ವೀರಾಜನೇಯ, ಬಿ.ಮಾರೆಣ್ಣ, ಜಿ. ತಮ್ಮನ್ನೆಳ್ಳಪ್ಪ, ಸೋಮಶೇಖರ್ ಬಣ್ಣದಮನೆ, ಗೋಪಾಲ ಕೃಷ್ಣ,ನಗರಸಭೆ ಸದಸ್ಯರಾದ ಮಹಮ್ಮದ್ ಗೌಸ್, ಜಿ ರಾಘವೇಂದ್ರ, ಎಸ್.ಬಿ.ಮಂಜುನಾಥ, ಸಣ್ಣ ಮಾರೆಪ್ಪ, ಲಿಂಗಣ್ಣ ನಾಯಕ, ಭರತ್ ಕುಮಾರ್ ಇತರರಿದ್ದರು.

 

Leave a Reply

Your email address will not be published. Required fields are marked *

error: Content is protected !!