
ಪದವಿ ಹಾಗೂ ಸ್ನಾತಕೋತ್ತರ ಪದವಿ
ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ SFI ಖಂಡಿನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೦- ಪ್ರಸಕ್ತ 2022- 23 ಸಾಲಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ M.A, ಕನ್ನಡ, ರಾಜ ಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸ, M.COM, MSC, ಹಾಗೂ ಪದವಿಯ B.A, B.COM, BSC ಸೇರಿದಂತೆ ವಿವಿಧ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಈ ಶೈಕ್ಷಣಿಕ ವರ್ಷದಲ್ಲಿ ದಿಢೀರನೆ ಹೆಚ್ಚಳ ಮಾಡಿರಿವು ದಾಖಲಾತಿ ಶುಲ್ಕ ದಿಂದ ವಿ.ವಿ ಕ್ಯಾಂಪಸ್ ನಲ್ಲಿ ಕೆಲವು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ದಾಖಲಾತಿ ಮಾಡಲಾರದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕ್ಕೊಳಿಸಿರುವಿದನ್ನು ತಕ್ಷಣ ಶುಲ್ಕ ಹೆಚ್ಚಳ ಆದೇಶ ಹಿಂದೆ ಪಡಿಯಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯ ಸಮಿತಿಯು ಆಗ್ರಹಿಸಿದೆ.
ಈ ಕುರಿತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದು.ಮನವಿಯಲ್ಲಿ ವಿ.ವಿಯ ವಿದ್ಯಾರ್ಥಿ ವಿರೋಧಿ ಆಡಳಿತದಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣವನ್ನು ಮುಂದವರಿಸಬೇಕಾ ಅಥವಾ ನಿಲ್ಲಿಸಿಬೇಕಾ ಎಂಬ ಗೊಂದಲದಲ್ಲಿ ಇದ್ದಾರೆ ರೂಪಾಯಿ 4000 ಇದ್ದ ದಾಖಲಾತಿ ಶುಲ್ಕವನ್ನು ಬರಗಾಲದ ಸಂದರ್ಭದಲ್ಲಿಯು ವಿಶ್ವವಿದ್ಯಾಲಯವು ದಿಢೀರನೆ ರೂ.18500.ಗೆ ಹೆಚ್ಚಳ ಮಾಡಿರವುದು ವಿಧ್ಯಾರ್ಥಿ ವಿರೋಧಿ ದೋರಣೆ ಎಂದು ಟಿಕಿಸಿದ್ದಾರೆ.
ರೂ,18500 ರೂಪಾಯಿ ಶುಲ್ಕವನ್ನು ಕಟ್ಟಿ ವಿದ್ಯಾಭ್ಯಾಸವನ್ನು ಮುಂದುವರಿಸಲಾರದ ಹಲವು ವಿದ್ಯಾರ್ಥಿಗಳು ಒಂದಿಲ್ಲದ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಪದವಿ ದ್ವಿತೀಯ ವರ್ಷದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಮಾಡಸಿದ್ದರು ವಿದ್ಯಾರ್ಥಿಗಳಿಗೆ ಇಂದಿನವರೆಗೂ UUCMS ನಲ್ಲಿ ಮರು ಸಂದೇಶ ಬಂದಿರಿವುದಿಲ್ಲ ಮತ್ತು ಆರ್ಥಿಕ ಸಮಸ್ಯೆಯಿಂದ ಹಾಗೂ ಹಾಸ್ಟೆಲ್ ಸಿಗದ ಕಾರಣ ವಿದ್ಯಾಭ್ಯಾಸ ಮುಂದುವರಿಸಲು ಕೆಲವು ವಿದ್ಯಾರ್ಥಿಗಳು ಕಾಲೇಜ್ ಬದಲಾವಣೆ ಮಾಡಿಕೊಳ್ಳಲು ಸುಮಾರು ಒಂದು ವಾರದಿಂದ ವಿವಿಧ ಕಾಲೇಜುಗಳಿಗೆ ಹಾಗೂ ವಿಶ್ವವಿದ್ಯಾಲಯಕ್ಕೆ ಬಂದು ಹೇಳಿದರು ಸಮಸ್ಯೆಗೆ ಪರಿಹಾರ ದೊರಕಿರುವುದಿಲ್ಲ, ದಾಖಲಾತಿಯ ದಿನಾಂಕ ವಿಸ್ತರಣೆ ಮಾಡಲು ಸೇರಿದಂತೆ ಅನೇಕ ವಿವಿಧ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.
ಕುಲಪತಿಗಳು ಮತ್ತು ಕುಲಸಚಿವರುಗಳಾದ ತಾವುಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಘಟನೆ ಹಾಗೂ ವಿ.ವಿ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಜಂಟಿ ಸಭೆ ಕರೆದು ಸಮಸ್ಯೆ ಪರಿಹಾರ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ರಾಜ್ಯ ಸಮಿತಿ ಸದಸ್ಯರಾದ ಶಿವರಡ್ಡಿ, ಮುಂಖಡರಾದ ಪವನಕುಮಾರ, ಅಮರಯ್ಯ ಹೀರೆಮಠ,ಮಹೇಶ ಮಾರುತಿ, ಅಮರಯ್ಯ ಇತರರು ಇದ್ದರು.