ba26e2cd-b5cc-449b-a53e-346176d17c84

ವಿದ್ಯುತ್ ಅವಘಡ ಎಂಟು

ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆ ನಾಶ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ, ೧೯-  ಕಮಲಾಪುರದ ಕಬ್ಬಿನ ಗದ್ದೆಯಲ್ಲಿ ಶಾರ್ಟ ಸರ್ಕ್ರಿಟ್‌ನಿಂದಾಗಿ ಸುಮಾರು ಎಂಟುವರೆ ಎಕರೆ ಕಬ್ಬಿನ ಬೆಳೆ ನಾಶವಾಗಿದೆ ಎಂದು ರೈತ ಮುಖಂಡ ಕಾರ್ತಿಕ್ ತಿಳಿಸಿದ್ದಾರೆ.

ಸಮಿಪದ ಕಮಲಾಪುರ ಗ್ರಾಮದ ಸ.ನಂ. 486/ಎ/5 ರಲ್ಲಿ 2 ಎಕರೆ.ಜಿ.ವಿಶ್ವನಾಥ್‌ರವರಿಗೆ ಸೇರಿದ 2 ಎಕರೆ . ದ್ಯಾವಮ್ಮ ರವರಿಗೆ ಸೇರಿದ 486/ಎ4ಬಿ 2 ಎಕರೆ , ಬಂಡಿ ಪರಮೇಶಪ್ಪ, ಬಂಡಿ ರಾಮಪ್ಪ ರವರಿಗೆ ಜಂಟಿ ಖಾತೆಯಲ್ಲಿರುವ ಸ.ನಂ.486/ಬಿ1ಬಿ ನ 3 ಎಕರೆ, ಬಿ1ಬಿ-486/1 ಸ.ನಂ ವುಳ್ಳ 1.5 ಎಕರೆ ಜಮೀನಿನಲ್ಲಿನ ಕಬ್ಬಿನ ಬೆಳೆ ನಾಶವಾಗಿದೆ , ಹೀಗೆ ಒಟ್ಟು 8 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆ ನಾಶವಾಗಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!