2c136fae-be38-4577-97e1-318669006cc9

ಸೋಮಸಮುದ್ರದಲ್ಲಿ ಅಶ್ವಾರೂಡ ಬಸವೇಶ್ವರರ ಪುತ್ಥಳಿ ಅನಾವರಣ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 9- ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿರುವ ಕೊಟ್ಟೂರುಸ್ವಾಮಿ ಶಾಖಾಮಠದ ಶ್ರೀ ಗಳ ಆಶಯದಂತೆ ಗ್ರಾಮದಲ್ಲಿ ಅಶ್ವಾರೂಡ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಮುಂದಾಗಿದೆ‌.

ಬಸವೇಶ್ವರರ ಪುತ್ಥಳಿ ಹಾಗೂ ಗದ್ದುಗೆ ನಿರ್ಮಾಣಕ್ಕೆ 15 ಲಕ್ಷ ರೂಪಾಯಿಗಳನ್ನು ಸೋಮಸಮುದ್ರ ಗ್ರಾಮದ ಭಕ್ತರು ದೇಣಿಗೆ ನೀಡಿದ್ದಾರೆ.

ನಾಳೆ ಬಸವಜಯಂತಿಯ ಅಂಗವಾಗಿ ಸಮಸ್ಥ ಗ್ರಾಮಸ್ಥರು ಸೇರಿಕೊಂಡು ಗ್ರಾಮವನ್ನು ಸಿಂಗರಿಸಿ ‘ಶ್ರೀ ಬಸವೇಶ್ವರರ ಪುತ್ಥಳಿಯ ಅನಾವರಣವನ್ನು ಬೆಳಿಗ್ಗೆ 6 ಗಂಟೆಗೆ ಕೊಟ್ಟೂರು ಸ್ವಾಮಿ ಮಠದ ಬಸವಲಿಂಗ ಸ್ವಾಮಿಗಳು ನೆರವೇರಿಸಲಿದ್ದಾರೆ.

ಗ್ರಾಮದ ಶ ಕೊಟ್ಟೂರುಸ್ವಾಮಿ ಶಾಖಾಮಠದ ಸಿದ್ಧಲಿಂಗ ದೇಶಿಕರು ಹಾಗೂ ಹಲವಾರು ಮಠಾಧೀಶರು, ಶಾಸಕರು, ರಾಜಕೀಯ ಧುರೀಣರು, ಗಣ್ಯಮಾನ್ಯರು, ಸರ್ವಸಮಾಜಗಳ ಬಾಂಧವರು ಭಾಗವಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!