WhatsApp Image 2024-02-24 at 6.51.45 PM

22 ನೇ ವಾರದ ಶ್ರಮದಾನ : ಮಹಿಳಾ ಸಬಲೀಕರಣಕ್ಕಾಗಿ ಹೆಣ್ಣು ಮಗು ಮತ್ತು ಕುಟುಂಬಸ್ಥರಿಂದ 20 ಸಸಿ ನೆಡುವ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,24- ಕರ್ನಾಟಕ ಪರಿಸರ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಹಾಗೂ ಪ್ರಜಾವಾಣಿ ಮಹಾ ಸಾಧಕ ಪ್ರಶಸ್ತಿಯ ಪುರಸ್ಕೃತರಾಗಿರುವ ಮಲ್ಲಿಕಾರ್ಜುನ್ ಟಿ, ಕೆ ಎ ಎಸ್. ಉಪಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ ಕೊಪ್ಪಳ, ಹಾಗೂ ಪರಿಸರ ಪ್ರೇಮ ತಂಡ, ಕೊಪ್ಪಳ , ಕಲ್ ತಾವರಗೇರಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬರುವ ಕೂಕನಪಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೂಕನಪಳ್ಳಿಯಲ್ಲಿ 22 ನೇ ವಾರದ ಶ್ರಮದಾನ ಕಾರ್ಯಕ್ರಮವನ್ನು ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದರು.

ಟಿ. ಮಲ್ಲಿಕಾರ್ಜುನ್ ಸ್ವಂತ ಹಣದಲ್ಲಿ ಮತ್ತು ಆಸಕ್ತ ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಸರ್ಕಾರಿ ಅಂಗನವಾಡಿ ಕಟ್ಟಡ ಸುಂದರಗೊಳಿಸಲು ಬಣ್ಣ ಹಚ್ಚುವ ಕಾರ್ಯಕ್ರಮ ಹಾಗೂ ಮಹಿಳಾ ಸಬಲೀಕರಣಗೊಳ್ಳುವ ಉದ್ದೇಶದಿಂದ ಮತ್ತು ಪರಿಸರ ಸಂರಕ್ಷಣೆ ಮಾಡಲು ಇತ್ತೀಚಿನ ದಿನಗಳಲ್ಲಿ ಹುಟ್ಟಿದ ಹೆಣ್ಣು ಮಗು ಮತ್ತು ಕುಟುಂಬಸ್ಥರಿಂದ 20 ಸಸಿ ನೆಡುವ ಕಾರ್ಯಕ್ರಮ ಸ್ವಚ್ಛತೆಯ ಹಿತದೃಷ್ಟಿಯಿಂದ ಸದರಿ ಶಾಲಾ ಆವರಣದಲ್ಲಿ ಸ್ವಚ್ಛತೆಗೊಳಿಸುವುದು ಹಾಗೂ ಸಂಸ್ಕಾರ ಸಂಸ್ಕೃತಿ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಾಗು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು  ಸದರಿ 22 ನೇ ವಾರದ ಶ್ರಮಧಾನ ಕಾರ್ಯಕ್ರಮಕ್ಕೆ ಜನರು ಸ್ವ ಇಚ್ಛೆಯಿಂದ ಭಾಗವಹಿಸಿ ಶ್ರಮಧಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಪ್ಪ ನಾಯಕ, ಪಂಚಾಯತ ಅಭಿವೃದ್ಧಿ ಅಧಿಕಾರಿ ಯಮನೂರಪ್ಪ ಕಬ್ಬಣ್ಣವರ, ಗ್ರಾಮ ಪಂಚಾಯತ್ ಸದಸ್ಯರಾದ ಶಿವಬಸಪ್ಪ ಕರಡಿ, ಕೃಷ್ಣ ಪ್ಪ ಪೂಜಾರ, ಸರಸ್ವತಿ ಅಮರೇಶ ಚಕ್ರಸಾಲಿ, ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷ ಯಮನೂರಪ್ಪ ಗುಳದಳ್ಳಿ, ಸದಸ್ಯರಾದ  ಅಮರೇಶ ಮೇಟಿ, ಕೆಂಚಪ್ಪ ವೀರಾಪೂರ ಮತ್ತು  ಸದಸ್ಯರು ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷರು, ಅಂಗನವಾಡಿ ಆಶಾಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು, ಸಂಜೀವಿನಿ ಸ್ವ ಸಾಹಯ ಒಕ್ಕೂಟದ ಸದಸ್ಯರು ಭಾಗವಹಿಸಿ ಸದರಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.

ಪರಿಸರ ಪ್ರೇಮ ತಂಡ, ಕೊಪ್ಪಳ ಹಾಗೂ ಗ್ರಾಮ ಪಂಚಾಯತ್ ಕಲ್ ತಾವರಗೇರಾ

Leave a Reply

Your email address will not be published. Required fields are marked *

error: Content is protected !!