WhatsApp Image 2024-07-23 at 4.25.31 PM

25-26 ರಂದು ಕಾರ್ಗಿಲ್ ವಿಜಯ ದಿವಸ್ ದಿನಾಚರಣೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 23- ಜಿಲ್ಲೆಯ ಮಾಜಿ ಸೈನಿಕರು ಮತ್ತು ವೀರ ನಾರಿಯರ ಕಲ್ಯಾಣ ಸಮಿತಿ ವತಿಯಿಂದ 25 ನೇ ಕಾರ್ಗಿಲ್ ವಿಜಯ ದಿವಸ್ ದಿನಾಚರಣೆಯ ಸಮಾರಂಭವನ್ನು ಜು.25 ಮತ್ತು 26 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಜು.25 ರಂದು ಸಂಜೆ 06 ಗಂಟೆಗೆ ನಗರದ ಎಸ್‍ಪಿ ವೃತ್ತದಿಂದ ದುರ್ಗಮ್ಮ ಗುಡಿಯ ಮೂಲಕ ಎಸ್‍ಪಿ ಕಚೇರಿಯ ಮುಂಭಾಗದ ಅಮರ್ ಜವಾನ್ ಯುದ್ದ ಸ್ಮಾರಕದವರೆಗೆ ಮೇಣದ ಬತ್ತಿಯೊಂದಿಗೆ ಪಾದಯಾತ್ರೆ ನಡೆಸಿ, ಸ್ಮಾರಕಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಗುವುದು.

ಜು.26 ರಂದು ಬೆಳಿಗ್ಗೆ 09 ಗಂಟೆಗೆ ಎಸ್‍ಪಿ ಕಚೇರಿಯ ಮುಂಭಾಗದ ಅಮರ್ ಜವಾನ್ ಯುದ್ದ ಸ್ಮಾರಕಕ್ಕೆ ಗಣ್ಯರು, ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಸಾರ್ವಜನಿಕರಿಂದ ಪುಷ್ಪಗುಚ್ಛ ಮತ್ತು ಹೂವಿನ ಮಾಲಾರ್ಪಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!