
ಅಂಜನಾದ್ರಿ ಹುಂಡಿಯಲ್ಲಿ 4 ವಿದೇಶಿ ನಾಣ್ಯ 58 ದಿನದಲ್ಲಿ 34 ಲಕ್ಷ ಸಂಗ್ರಹ
ಕರುನಾಡ ಬೆಳಗು ಸುದ್ದಿ
ಗ0ಗಾವತಿ, 24- ತಾಲೂಕಿನ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನದಲ್ಲಿ (ಚಿಕ್ಕರಾಂಪುರ) ದಲ್ಲಿ ಅ.24 ರಂದು ಕೋಪ್ಪಳ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಕಾರ್ಯನಿರ್ವಾಹಣ ಅಧಿಕಾರಿ ಇವರುಗಳ ನೇತೃತ್ವದಲ್ಲಿ ಹುಂಡಿ ತೆರೆಯಲಾಯಿತು.
ಅಗಷ್ಟ. 27 ರಿಂದ ಅಕ್ಟೊಬರ್. 24 ರವರೆಗೆ ಒಟ್ಟು 58 ದಿನಗಳ ಅವಧಿಯಲ್ಲಿ ಒಟ್ಟು ರೂ.33,79,910 ರೂ.ಗಳು ಸಂಗ್ರಹವಾಗಿರುತ್ತದೆ. 4 ವಿದೇಶಿ ನಾಣ್ಯಗಳು (2-ಯುಎಇ, 1-ಬ್ರೆಜಿಲ್,1-ಯುಎಸ್ಎ ನಾಣ್ಯಗಳು) ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.
ಈ ಸಂದರ್ಭದಲ್ಲಿ ಶಿರಸ್ತೇದಾರಾದ ಕೃಷ್ಣವೇಣಿ, ರವಿಕುಮಾರ್ ನಾಯಕವಾಡಿ, ಸುಹಸ್, ಕಂದಾಯ ನಿರೀಕ್ಷಕ ಹಾಲೇಶ ಗುಂಡಿ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಇಂದಿರಾ, ಮಂಜುನಾಥ, ಅನ್ನಪೂರ್ಣ, ಪ್ರ.ದ.ಸ ಶೇಖರಪ್ಪ ಆಹಾರ ನಿರೀಕ್ಷಕರು, ಗಾಯತ್ರಿ, ಶ್ರೀರಾಮ ಜೋಶಿ, ಸುಧಾ, ದ್ವಿ.ದ.ಸ, ನಾಗವೇಣಿ, ಪೂಜಾ, ರಾಜು ಭಜಂತ್ರಿ, ಮಂಜುನಾಥ ದುಮ್ಮಾಡಿ, ವೀರಯ್ಯ, ರಾಘವೇಂದ್ರ, ಗ್ರಾಮ ಆಡಳಿತ ಅಧಿಕಾರಿ ಹಾಗೂ ಪಿಕೆಜಿಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಶ್ರೀಧರ್, ಸುನಿಲ್, ಸತೀಶ್, ಮಂಜುನಾಥ್ ಪೋಲಿಸ್ ಸಿಬ್ಬಂದಿ, ಹನುಮಂತಪ್ಪ ಪ್ರವಾಸಿ ಮಿತ್ರರು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಭಾಗವಹಿಸಿದ್ದರು.
ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು.
ಕಳೆದ ಬಾರಿ ಅಗಷ್ಟ. 27 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ.36,96,983 ಸಂಗ್ರಹವಾಗಿತ್ತು.