WhatsApp Image 2024-10-24 at 7.35.24 PM

ಈ.ಧನರಾಜಗೆ “ಆಚಾರ್ಯ ಶ್ರೀ 2024” ಪ್ರಶಸ್ತಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 24- ಮೀಡಿಯಾ ಸ್ಟಡಿ ಸೆಂಟರ್ ಕೊಡುವ “ಆಚಾರ್ಯ ಶ್ರೀ 2024” ಪ್ರಶಸ್ತಿಗೆ ಗಂಗಾವತಿಯ ಶಿಕ್ಷಣ ತಜ್ಞ ,ರಾಷ್ಟೀಯ ಸಂಪನ್ಮೂಲ ವ್ಯಕ್ತಿ ಹಾಗೂ ಬೆಂಗಳೂರು ಇಂಡೋ ಗ್ಲೋಬ್ ಸಂಸ್ಥೆ CEO ಈ.ಧನರಾಜ ಆಯ್ಕೆಯಾಗಿದ್ದಾರೆ.

ಈ ಕುರಿತು ಆಯ್ಕೆ ಮಾಡಿರುವ ಮೀಡಿಯಾ ಸ್ಟಡಿ ಸೆಂಟರ್ ಬೆಂಗಳೂರು ಅವರು ಶಿಕ್ಷಣ ಕ್ಷೇತ್ರದಲ್ಲಿ ತಾವು ಮಾಡಿದ ಅಮೋಘ ಸಾಧನೆಯನ್ನು ಪರಿಗಣಿಸಿ ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಸಮಿತಿಯು ತಮ್ಮನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.

ಇದೇ 26ನೇ ಅಕ್ಟೋಬರ್ 2024, ಶನಿವಾರದಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ‘ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ’ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!