
ರೇಣುಕಾಚಾರ್ಯರ ಭಾವಚಿತ್ರಕ್ಕೆ ಜಯಂತಿ ಆಚರಣೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,24- ಸರಳ ರೀತಿಯಲ್ಲಿ ಶ್ರೀ ಮದ್ ರೇಣುಕಾಚಾರ್ಯರ ವೃತ್ತದ ಹತ್ತಿರ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾನ ಹಿರೇಮಠದ ಷ.ಬ್ರ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಧರಮುರಡಿ ಹಿರೇಮಠದ ಷ.ಬ್ರ.ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಚಿಕ್ಕಮ್ಯಾಗೇರಿ -ಇಟಗಿ ಭೂಕೈಲಾಸ ಗದ್ದುಗೆಯ ಹಿರೇಮಠದ ಡಾಕ್ಟರ್ ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಜಂಗಮ ಸಮಾಜದ ಅಧ್ಯಕ್ಷ ವಿರಯ್ಯ ಸಂಗನಾಳಮಠ ಬಸಲಿಂಗಯ್ಯ ಜಡಿಮಠ ಸಮಾಜದ ಮುಖಂಡರು ಮತ್ತು ಇತರರು ಭಾಗವಹಿಸಿದ್ದರು.