
ಕೊಪ್ಪಳ : ಸರಪಳಿ ಗುಂಡು ಎಸೆತದಲ್ಲಿ ಹೊಸ ದಾಖಲೆ ಬರೆದ ಐಶ್ವರ್ಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕು. ಐಶ್ವರ್ಯ ಸರಪಳಿ ಗುಂಡು ಎಸೆತದ ಸ್ಪರ್ದೆಯಲ್ಲಿ ೨೫.೨೩ ಮೀಟರ್ ದೂರ ಎಸೆದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಯಲಯದಲ್ಲಿ ೨೦೨೪-೨೫ನೇ ಸಾಲಿನಲ್ಲಿ ನಡೆದ ೧೮ನೇ ಅಂತರ್ ಕಾಲೇಜು ಅಥಲೆಟಿಕ್ಸ್ ಕ್ರೀಡಾಕೂಟದಲ್ಲಿ ಹೊಸದಾಗಿ ದಾಖಲೆಯನ್ನು ನಿರ್ಮಿಸಿದ್ದಾಳೆ.
೨೦೨೩-೨೪ನೇ ಸಾಲಿನಲ್ಲಿ ೨೦.೬೩ಮೀಟರ್ ಎಸೆದು ತಾನೇ ನಿರ್ಮಿಸಿದ್ದ ವಿಶ್ವವಿದ್ಯಾಲಯದ ದಾಖಲೆಯನ್ನು ಮುರಿದು, ೨೦೨೪-೨೫ನೇ ಸಾಲಿನಲ್ಲಿ ೨೫.೨೩ಮೀಟರ್ ದೂರ ಸರಪಳಿ ಗುಂಡು ಎಸೆದು ಹೊಸದಾಗಿ ದಾಖಲೆಯನ್ನು ನಿರ್ಮಿಸಿದ್ದಾಳೆ.
ವಿದ್ಯಾರ್ಥಿನೀಯ ಈ ಸಾದನೆಯನ್ನು ಮೆಚ್ಚಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಯಲದ ಕುಲಪತಿಗಳಾದ ಶ್ರೀಮತಿ ತುಳಸಿ ಮಾಲಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶನಾಲಯವು ಇವರಿಗೆ ೫೦೦೦ ರೂಪಾಯಿಗಳ ಪ್ರೋತ್ಸಾಹಧನವನ್ನು ಹಾಗೂ ಪ್ರಶಸ್ತಿ ಪಾರಿತೋಶಕವನ್ನು ನೀಡಿ ಗೌರವಿಸಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಿದ ನಮ್ಮ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಕು.ಅಕ್ಷತಾ ರೆಡ್ಡಿ ಇವರೂಕೂಡ ಸರಪಳಿ ಗುಂಡು ಎಸೆತದಲ್ಲಿ ೧೯.೨೯ ಮೀಟರ್ ಎಸೆದು ದ್ವಿತೀಯ ಸ್ಥಾನವನ್ನು ಹಾಗೂ ಕು.ದೇವಮ್ಮ ಇವರು ೧೦,೦೦೦ ಮೀಟರ್ ಓಟವನ್ನು ೫೩ ನಿಮಿಷಗಳಲ್ಲಿ ಪೂರ್ಣಗೊಳಿಸಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
ವಿದ್ಯಾರ್ಥಿನೀಯರ ಈ ಸಾಧನೆಯನ್ನು ಮೆಚ್ಚಿ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಲಮಾಣಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಪ್ರದೀಪ್ ಕುಮಾರ್ ಯು ಹಾಗೂ ಕಾಲೇಜಿನ ಸಮಸ್ಥ ಭೋಧಕ, ಬೋಧಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನೀಯರು ಶುಭಕೋರಿದ್ದಾರೆ.