
ಟಿ.ಬಿ ರೋಗಿಗಳಿಗೆ ಧೈರ್ಯ ಸ್ಥೆöÊರ್ಯದೊಂದಿಗೆ ಮಾತ್ರೆಗಳನ್ನು ನೀಡಿ : ಡಾ.ಪಲ್ಲವಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 24- ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗಿಗಳ ಬೆಂಬಲ ಗುಂಪು ಸಭೆ ಹಮ್ಮಿಕೊಳ್ಳಲಾಗಿತ್ತು ವೈದ್ಯಾಧಿಕಾರಿ ಪಲ್ಲವಿ ಮಾತನಾಡಿ, ರೋಗಿಗಳಿಗೆ ಧೈರ್ಯ ಸ್ಥೆöÊರ್ಯ ತುಂಬೋದರ ಮೂಲಕ ಮಾತ್ರೆಗಳನ್ನು ತಪ್ಪದೆ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕ್ಷಯರೋಗ ಪರ್ವೀಕ್ಷಕ ಹುಲುಗಪ್ಪ ತಾಲೂಕ ಕ್ಷಯರೋಗ ಪ್ರಯೋಗಶಾಲಾ ಮೇಲ್ವಿಚಾರಕ ಅಂದಾನಪ್ಪ ಅಬ್ಬಿಗೇರಿ ಮಾತನಾಡಿ ಟಿಬಿ ರೋಗಿಗಳಿಗೆ ಮಾತ್ರೆಗಳ ಜೊತೆಗೆ ನಿಕ್ಷಯ್ ಪೌಷ್ಠಿಕ ಎಂದು ಸರಕಾರದ ವತಿಯಿಂದ ಪ್ರತಿ ತಿಂಗಳು೫೦೦ ರೂಪಾಯಿಗಳು ನೀಡಲಾಗುತ್ತಿದೆ. ಹಾಗೆಯೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ೪೪ ಜನ ಕ್ಷಯ ರೋಗಿಗಳಿಗೆ, ಜೆಎಸ್ಡಬ್ಲ್ಯೂ ಜಿಂದಾಲ್ ವತಿಯಿಂದ ಸರಬರಾಜು ಆದ ಪೌಷ್ಟಿಕ ಆಹಾರದ ಕಿಟ್ ಗಳನ್ನು ಎಲ್ಲಾ ಕ್ಷಯ ರೋಗಿಗಳಿಗೆ ವಿತರಿಸಲಾಗುವುದು. ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ತಾಲೂಕಾ ಹಿರಿಯ ಆರೋಗ್ಯ ಭೀಮರಾಜ್ ರವರು ಟಿಬಿ ರೋಗದ ಲಕ್ಷಣ , ವೈಯಕ್ತಿಕ ಸ್ವಚ್ಛತೆ ಪೌಷ್ಠಿಕ ಆಹಾರ ಸೇವನೆ ಮತ್ತು ತಪ್ಪದೆ ಮಾತ್ರೆಗಳನ್ನು ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ ಆಗ ೨೦೨೫ರ ಒಳಗೆ ಟಿಬಿ ಮುಕ್ತ ಭಾರತ ಮಾಡಲು ಅನುಮಾನವಿಲ್ಲ ಎಂದರು.
ತಾಲೂಕ ಕ್ಷಯರೋಗ ಪ್ರಯೋಗಶಾಲಾ ಮೇಲ್ವಿಚಾರಕ ಅಂದಾನಪ್ಪ ಅಬ್ಬಿಗೇರಿ, ನಗರ ಕ್ಷಯರೋಗ ಪರೀವಿಕ್ಷಕ ಹುಲುಗಪ್ಪ, ತಾಲೂಕ ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ಭೀಮರಾಜ್, ನಗರ ಕ್ಷಯರೋಗ ಪರೀವಿಕ್ಷಕ ಹುಲುಗಪ್ಪ, ತಾಲೂಕ ಮಲೇರಿಯ ಮೇಲ್ವಿಚಾರಕ ಶ್ರೀನಿವಾಸ್, ಔಷದ ತಜ್ಞರಾದ ಜ್ಯೋತಿ, ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.