
ಆರ್ಎಸ್ಎಸ್ ಸಂಘದಿ0ದ ಆಕರ್ಷಕ ಪಥ ಸಂಚಲನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ನಗರದಲ್ಲಿ ಶನಿವಾರ ಸಂಜೆ ರಾಷ್ಟಿಯ ಸ್ವಯಂಸೇವಕ ಸಂಘದಿ0ದ ವಿಜಯದಶಮಿ ಅಂಗವಾಗಿ ಉತ್ಸವ ಮತ್ತು ಪಥ ಸಂಚಲನ ಆಕರ್ಷವಾಗಿ ಜರುಗಿತು.
ನಗರದ ಶಾರದಾ ಟಾಕೀಸ್ ಭಾಗದ ಮೈದಾನದಿಂದ ಹೊರಟು ಗಡಿಯಾರ ಕಂಬ, ಕೋಟೆ ಗಣೇಶ ಗುಡಿ, ಛತ್ರಪತಿ ಶಿವಾಜಿ ವೃತ್ತ, ಟಾಂಗಾ ಕೂಟ, ಜವಾಹರ್ ರಸ್ತೆ ಮಾರ್ಗವಾಗಿ ಅಶೋಕ ವೃತ್ತ, ದುರ್ಗಮ್ಮ ಕಟ್ಟೆ, ಚೆನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತ, ಟಾಂಗಾ ಕೂಟ ಗಡಿಯಾರ ಕಂಬ ಸ್ವಸ್ಥಾನಕ್ಕೆ ಮರುಳಿತು.
ಪಥ ಸಂಚಲನದಲ್ಲಿ ನೂರಾರು ಸ್ವಯಂ ಸೇವಕರು ಭಾಗವಹಿಸಿ ದಂಡ ಸಹಿತ, ಗಣವೇಷದಲ್ಲಿ ಗಮನಸೇಳೆದರು, ಪಥ ಸಂಚಲನ ಬರುವ ಮಾರ್ಗದಲ್ಲಿ ರಂಗೋಲಿ, ಪುಷ್ಪ ತೋರಣಗಳಿಂದ ಅಲಂಕರಿಸಿ ಸಂಚಲನದಲ್ಲಿ ಬರುವ ಭಗವ್ಧಜ್ ಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಗತಿದರು.
ಬೌದ್ಧಿಕ : ಪಥ ಸಂಚಲನದ ನಂತರ ಜರುಗಿದ ಸಾಂಘಿಕ ಕಾರ್ಯಕ್ರಮದಲ್ಲಿ ರಾ.ಸ್ವ.ಸಂಘ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಿರೀಶ್ ಹೆಬ್ಬಾರ್ ಬೌದ್ಧಿಕ್ ಮಾಡಿದರು.
ಕೊಪ್ಪಳ ಜಿಲ್ಲಾ ಹೋಟೆಲ್ ಮಾಲಿಕರ ಸಂಘ ಅಧ್ಯಕ್ಷ ಶಶಿಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು.