
ಗಾಂಧಿ ಬಳಗದಿಂದ ಕಾಮನೂರು ಪಾದಯಾತ್ರೆ
ಗಾಂಧಿ ತತ್ವಕ್ಕೆ ಕಾಮನೂರು ಗ್ರಾಮ ಮಾದರಿ : ಡಾ.ಪ್ರಭುರಾಜ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨- ಜಿಲ್ಲೆ ಹಾಗೂ ರಾಜ್ಯಕ್ಕೆ ಕಾಮನೂರ ಗ್ರಾಮ ಮಾದರಿಯಾಗಿದೆ ಗ್ರಾಮದ ಹಿರಿಯರು ಗಾಂಧೀಜಿ ತತ್ವಗಳನ್ನು ತಮಗೆ ಅರಿವಿಲ್ಲದಂತೆ ಈವರೆಗೂ ಆಚರಿಸಿಕೊಂಡು ಬಂದಿದ್ದಾರೆ ಎಂದು ಎಂದು ಡಾ.ಪ್ರಭುರಾಜ ನಾಯಕ ಹೇಳಿದರು.
ಅವರು ಗಾಂದೀ ಜಯಂತಿ ಅಂಗವಾಗಿ ಕೊಪ್ಪಳ ನಗರದ ಕಾಮನೂರ ಗ್ರಾಮಕ್ಕೆ ಗಾಂಧಿ ಬಳಗ ಕೊಪ್ಪಳದಿಂದ ಹಂಮ್ಮಿಕೊAಡಿದ್ದ ಪಾದಯಾತ್ರೆ ನಂತರ ಕಾಮನೂರ ಗ್ರಮದಲ್ಲಿ ಮಾತನಾಡಿದರು.
ಗಾಂಧೀಜಿ ಅವರ ಸುಸ್ಥಿರ ಬದುಕು ಕುರಿತು, ಈ ಕೆಲಸವನ್ನು ಮುಂದಿನ ತೆಲೆಮಾರಿಗೆ ವರ್ಗಾಯಿಸುವ ಹೊಣೆಗಾರಿಕೆ ಕಾಮನೂರ ಗ್ರಾಮದ ಯುವಕರ ಮೇಲಿದೆ ಎಂದು ಹೇಳಿದರು.
ಗ್ರಾಮದ ಗ್ರಾಮ ಪಂಚಾಯತ ಸದಸ್ಯರಾದ ಮಲ್ಲಪ್ಪ ತುಬಾಕಿ ಅವರು ಗಾಂಧೀ ಬಳಗದ ತಾವೆಲ್ಲಾ ಕೊಪ್ಪಳದಿಂದ ಕಾಮನೂರಿಗೆ ಬಂದು, ನಮಗೆಲ್ಲಾ ಗಾಂಧೀ ಚಿಂತನೆ, ವಿಚಾರಧಾರೆ ಕುರಿತು ಗಟ್ಟಿಗೊಳಿಸುವ ಕೆಲಸ ಮಾಡಿರುವಿರಿ. ಈ ಕೆಲಸವನ್ನು ಮುಂದಿನ ತೆಲೆಮಾರಿನವರೆಗೂ ತಲುಪಿಸುವ ಹೊಣೆ ನಮ್ಮೂರಿನ ನಮ್ಮ ಗ್ರಾಮದ ಪ್ರತಿಯೊಬ್ಬರದು. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ ದೂರವಾಣಿ ಮೂಲಕ ಮಾತನಾಡಿ, ಗಂಗಾವತಿ ವಿಧಾನ ಸಭಾ ಕ್ಷೇತ್ರದಿಂದ ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ದತ್ತು ಗ್ರಾಮವನ್ನಾಗಿ ಕಾಮನೂರನ್ನು ಆಯ್ಕೆಮಾಡಲಾಗಿದೆ. ದುಶ್ಚಟ ಮುಕ್ತ ಕಾಮನೂರಿನಿಂತ ಗ್ರಾಮಗಳ ಸಂಖ್ಯೆ ಹೆಚ್ಚಾಗಲಿ ಎಂದು ಶುಭ ಸಾವಯವ, ಸುಸ್ಥಿರ, ನೈಸರ್ಗಿಕ, ಸಮಗ್ರ, ಗೋಪಾಲಕರು, ಕುರಿಸಾಕಾಣಿಕೆ ಹಾಗೂ ಈ ವರೆಗೂ ಕಾಮನೂರ ಗ್ರಾಮವನ್ನು ದುಶ್ಚಟ ಮುಕ್ತ ಗ್ರಾಮವನ್ನಾಗಿಸಲು ಶ್ರಮಿಸಿದ ಗ್ರಾಮದ ಹಿರಿಯರಿಗೆ ಗಾಂಧೀ ಬಳಗದ ವತಿಯಿಂದ ಗೌರವಿಸಲಾಯಿತು. ಪ್ರಾಸ್ತಾವಿಕ ನುಡಿಗಳನ್ನು ಬಸವರಾಜ ಸವಡಿ, ಆನಂದತೀರ್ಥ ಪ್ಯಾಟಿ, ನಾಗರಾಜ ಜುಮ್ಮನವರ ಮಾತನಾಡಿದರು.ಸಂಘಟಕ ಪ್ರಾಣೇಶ ಪೂಜಾರ ನಿರುಪಿಸಿದರು.
ಚಾಲನೆ : ಪಾದಯಾತ್ರೆಗೆ ನಸುಕಿನ ಜಾವ ೦೫ : ೪೦ ಕ್ಕೆ ಮಾಜಿ ಸಂಸದರಾದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ ತಹಶೀಲ್ದಾರ ವಿಠ್ಠಲ್ ಚೌಗಲಾ ಅಶೋಕ ವೃತ್ತದಲ್ಲಿ ರಘುಪತಿ ರಾಘವ ಭಜನ್ ನಂತರ,ಪಾದಯಾತ್ರೆಗಳಿಗೆ ಚಾಲನೆ ನೀಡಿದರು. ಪಾದಯಾತ್ರೆ ಉದ್ದಕ್ಕೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೀ ಜೈ, ಶಾಂತಿ ಶಿಸ್ತು, ಲಾಲ್ ಬಹದ್ದೂರ ಶಾಸ್ತ್ರೀ ಜೀ ಕೀ ಜೈ ಅಂತ ಘೋಷಣೆ ಹಾಕುತ್ತ ಸಾಗಿದರು.
ಪಾದಯಾತ್ರೆ ಮೂಲಕ ತೆರಳಿದ ಪಾದಯಾತ್ರಿಗಳು, ಕಾಮನೂರ ಗ್ರಾಮದ ಶಿಬಾರ ಕಟ್ಟೆ ತಲುಪುತ್ತಿದ್ದಂತೆ ಪ್ರತಿಯೊಬ್ಬ ಪಾದಯಾತ್ರೆಗೂ ನೂಲಿನ ಹಾರಹಾಕಿ, ಪಾದಯಾತ್ರೆಗಳ ಮೇಲೆ ಹೂವಿನ ಪಕಳೆಗಳನ್ನು ಹಾಕಿ ಭವ್ಯ ಸ್ವಾಗತ ಮಾಡಿದರು. ಕಾಮನೂರಿನ ಗ್ರಾಮಸ್ಥರು ಸ್ವಾಗತಿಸಿದರು. ಪಾದಯಾತ್ರೆ ತಂಡವನ್ನು ಇಡೀ ಗ್ರಾಮದ ಸುತ್ತಲೂ ಪಾದಯಾತ್ರೆಗಳಿಗೆ ಹೂವಿನ ಪಕಳೆಗಳನ್ನು ಹಾಕುತ್ತ ಹೆಜ್ಜೆ ಹಾಕಿದರು.
ಪಾದಯಾತ್ರೆಯಲ್ಲಿ ಬರಹಗಾರ ಆನಂದತೀರ್ಥ ಪ್ಯಾಟಿ,ಪ್ರಜಾವಾಣಿ ಜಿಲ್ಲಾ ವರದಿಗಾರರಾದ ಪ್ರಮೋದ,ನಾಗರಿಕ ದಿನಪತ್ರಿಕೆಯ ಸಂತೋಷ ದೇಶಪಾಂಡೆ, ಬಸವರಾಜ ಸವಡಿ, ಭರತ್ ಕಂದಕೂರ, ಶಂಕ್ರಯ್ಯ ಅಬ್ಬಿಗೇರಿಮಠ, ಸೋಮಲಿಂಗಪ್ಪ ಮೆಣಸಿನಕಾಯಿ, ಪ್ರಕಾಶಗೌಡ, ರಾಮಣ್ಣ ಶ್ಯಾವಿ, ಪ್ರಾಣೇಶ ಪೂಜಾರ, ನಾಗರಾಜ ನಾಯಕ ಡೊಳ್ಳಿನ, ಸುರೇಶ ಕಂಬಳಿ, ಹನುಮಂತಪ್ಪ ಕುರಿ, ಸೋಮಲಿಂಗಪ್ಪ ಬೆಣ್ಣೆ, ಯೋಗಾನರಸಿಂಹ ಪಿ.ಕೆ, ಮಂಜುನಾಥ ಪೂಜಾರ, ಪರಶುರಾಮ ಬಾವಿ, ಫಕೀರಪ್ಪ ಗುಳದಳ್ಳಿ, ಅಮರದೀಪ, ಶರಣಪ್ಪ ರೆಡ್ಡೇರ್, ಬೀರಪ್ಪ ಅಂಡಗಿ, ದೇವರಾಜ ಮೇಟಿ, ಮೌನೇಶ ಬಡಿಗೇರ, ಶಿವರಾಯಪ್ಪ , ಸೇರಿದಂತೆ ಸುಮಾರು ೯೦ ಕ್ಕೂ ಹೆಚ್ಚು ಜನ ಕೊಪ್ಪಳದಿಂದ ಕಾಮನೂರ ಗ್ರಾಮಕ್ಕೆ ಪಾದಯಾತ್ರೆ ಮಾಡಿದರು.
ಶಿಕ್ಷಕರ ಕಲಾಸಂಘ ಕೊಪ್ಪಳ, ಕರ್ನಾಟಕ ಸರ್ವೋದಯ ಮಂಡಲ ಕೊಪ್ಪಳ, ಕಲರವ ಶಿಕ್ಷಕರ ಸೇವಾ ಬಳಗ, ಗಾಂಧೀ ವಿಚಾರ ವೇದಿಕೆ, ಪತಂಜಲಿ ಯೋಗ ಸಮಿತಿ, ಅಶೋಕ ಸರ್ಕಲ್ ನಾಟಕ ತಂಡ ಕೊಪ್ಪಳ ಹಾಗೂ ವಿವಿಧ ಸಂಘಟನೆಗಳು ಹಾಜರಿದ್ದರು.