
ಕನ್ನಡಿಗರಿಂದ ಕನ್ನಡ ಉಳಿಯಬೇಕು : ಜಿ.ಎಸ್.ಗೋನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ಪಾಶ್ಚಾಮಾತ್ಯ ಸಂಸ್ಕೃತಿಯ ಹೊಡೆತದಿಂದ ಹಿಂದಿನ ಸನಾತನಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ ಯಾವುದೇ ಸಂಸ್ಕೃತಿ ನಾಡು ಉಳಿಯಬೇಕಾದರೆ ಪ್ರತಿಯೊಬ್ಬರೂ ಅದಕ್ಕೆ ಹೆಗಲು ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಕನ್ನಡಿಗರಿಂದಲೇ ಕನ್ನಡ ಉಳಿಯಬೇಕಾಗಿರುವುದು ಪ್ರಸ್ತುತ ಅತ್ಯವಶ್ಯಕವಾಗಿದೆ ಎಂದು ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷರು ಹಾಗೂ ಸಾಹಿತಿ ಜಿ.ಎಸ್.ಗೋನಾಳ ಅಭಿಪ್ರಾಯಪಟ್ಟರು.
ಪಕ್ಕದ ಬಹಾದ್ದೂರ ಬಂಡಿಯಲ್ಲಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ ಇವರಿಂದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಎರಡನೇ ದಿನದ ವಿಷಯ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು ಭಾಷಾ ಪ್ರೇಮವನ್ನು ಹೊಂದಿದವರು ಮಾತ್ರ ಭಾಷೆಯನ್ನು ಅಭಿವೃದ್ಧಿಪಡಿಸಬಲ್ಲರು. ವಿದ್ಯಾರ್ಥಿಗಳು ಕನ್ನಡವನ್ನು ಪ್ರೀತಿಸಬೇಕು, ಕನ್ನಡ ಪತ್ರಿಕೆಯನ್ನು ಹೆಚ್ಚು ಓದಬೇಕು, ಕನ್ನಡ ಭಾಷೆಗೆ ೨೦೦ ವರ್ಷಗಳ ಇತಿಹಾಸವಿದೆ. ನಾವು ಭಾಷಾ ಪ್ರೇಮವನ್ನು ಮರೆತು ಅನ್ಯ ಭಾಷಿಗರೊಂದಿಗೆ ಅವರ ಭಾಷೆಯಲ್ಲಿ ಮಾತನಾಡುತ್ತೇವೆ, ಇದು ದುರ್ದೈವ ಹಳೆಗನ್ನಡ, ನುಡಿಗನ್ನಡ, ಹೊಸಗನ್ನಡ ಈ ರೀತಿಯಾಗಿ ಕನ್ನಡ ಬೆಳೆದು ಬಂದಿದೆ ಕುವೆಂಪುರವರು ಹೇಳಿದಂತೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬುದನ್ನು ನಾವು ಯಾವಾಗಲೂ ನೆನಪಲ್ಲಿಟ್ಟುಕೊಳ್ಳಬೇಕು ಅದರಂತೆ ನಡೆದುಕೊಳ್ಳಬೇಕು ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಲಾರರು ಎನ್ನುವಂತೆ ಕನ್ನಡವನ್ನು ತಿಳಿಯದವರು ಕನ್ನಡದಲ್ಲಿ ಏನನ್ನು ರಚಿಸಲು ಸಾಧ್ಯವಿಲ್ಲ. ಉದಾಹರಣೆಗೆ ಐಎಎಸ್ ಅಧಿಕಾರಿಗಳಾದ ರಜನೀಶ್ ಗೋಯಲ್ರವರು ಕರ್ನಾಟಕಕ್ಕೆ ಸೇವೆಗೆ ಬಂದಾಗ ಅವರಿಗೆ ಕನ್ನಡ ಬರೆಯಲು ಬರುತ್ತಿರಲಿಲ್ಲ. ಈಗ ಅವರು ಕನ್ನಡವನ್ನು ಅತ್ಯಂತ ಸುಲಲಿತವಾಗಿ ಬರೆಯುತ್ತಾರೆ, ಓದುತ್ತಾರೆ. ಇದು ಕನ್ನಡ ಎಂದು ಮೂಗು ಮುರಿಯವರಿಗೆ ನೀತಿ ಪಾಠವಾಗಬೇಕಿದೆ. ಜಗತ್ತಿನ ಮಹಾನ್ ವ್ಯಕ್ತಿಗಳಲ್ಲಿ ಕನ್ನಡಿರಿಗೂ ಸ್ಥಾನಮಾನ ಇದೆ. ೩೭೧ಜೆ ಸೌಲಭ್ಯಗಳ ಕುರಿತು ಮಾತನಾಡಿ ಅದರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಿ ಎಂದು ಸ್ವಯಂ ಸೇವಕಿಯರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಶಾರದಾ ಎಸ್.ರಜಪುತ್, ಮಾತನಾಡುತ್ತಾ ಮಹಿಳೆಯವರು ಶಿಕ್ಷಣವಂತರಾದಾಗ ಮಾತ್ರ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಏಕಲವ್ಯನಿಗೆ ಗುರು ದ್ರೋಣಾಚಾರ್ಯರು ವಿದ್ಯೆ ಕಲಿಸಲು ನಿರಾಕರಿಸಿದರೂ, ಗುರುಗಳ ಮೂರ್ತಿಯನ್ನು ಮುಂದಿಟ್ಟುಕೊAಡು ಶಬ್ಧವೇದಿ ವಿದ್ಯೆಯನ್ನು ಕಲಿತು ಸಾಹಸಿಗರಾದರು ಎಂಬುದನ್ನು ಕಥೆಯ ಮೂಲಕ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಮತಿ ಮಂಜುಳಾ ಉಂಡಿ, ಗ್ರಾಂ.ಪA. ಸದಸ್ಯರಾದ ಯೋಗಾನಂದ ಲೆಬಗೇರಿ ಮಾತನಾಡಿದರು. ಅಧ್ಯಕ್ಷ ಸ್ಥಾನವನ್ನು ಎಸ್.ಎ.ರಜಪೂತ್ ವಹಿಸಿದ್ದರು. ಗಂಗಾ ತಂಡದವರು ಕಾರ್ಯಕ್ರಮ ನಿರ್ವಹಿಸಿದರು, ಸ್ವಯಂ ಸೇವಕಿ ರಿಜ್ವಾನ್ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ವಂದಿಸಿದರು.