11

ರಾಷ್ಟ್ರೀಯ ಸೇವಾ ಯೋಜನೆ ವಿವಿಧ ಚಟುವಟಿಕೆಗಳ ಉದ್ಘಾಟನೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 23- ವರ್ತಮಾನದ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಸಾಮರ್ಥ್ಯವನ್ನು ತೋರುತ್ತಿದ್ದಾರೆ ಇದಕ್ಕೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಅವರು ತೋರುತ್ತಿರುವ ಧಾರಣಾ ಶಕ್ತಿ ಕಾರಣ ಎಂದು ಮಹಾನಗರ ಪಾಲಿಕೆಯ ಮಹಾ ಪೌರರಾದ ಮುಲ್ಲಂಗಿ ನಂದೀಶ್ ಪ್ರತಿಪಾದಿಸಿದರು.

ಅವರು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ‌ ರಾಷ್ಟ್ರೀಯ ಸೇವಾ ಯೋಜನೆ,ಕ್ರೀಡೆ, ಸಾಂಸ್ಕೃತಿಕ , ರೇಂಜರ್ಸ, ಚಟುವಟಿಕೆಗಳ ಉದ್ಘಾಟನೆ,ಮತ್ತು ಪ್ರಥಮ‌ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕೂಡ ಉತ್ತಮ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ ವಿದ್ಯಾರ್ಥಿಗಳು ತರಗತಿ ಪಠ್ಯದ ಜೊತೆ ಪೂರಕ ಪುಸ್ತಕಗಳನ್ನು ಓದಿ ಹೆಚ್ಚು ಜ್ಞಾನ ಪಡೆಯಲು ಕರೆನೀಡಿದರು.

ಮಹಾ ನಗರ ಪಾಲಿಕೆ ಸದಸ್ಯರಾದ ಈರಮ್ಮ ಸುರೇಂದ್ರ ಇವರು ಮಾತನಾಡಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳು ಬದುಕಿನ ಕಷ್ಟ ಸುಖಗಳನ್ನು ಸರಿಯಾಗಿ ಅರಿತಿರುವ ಕಾರಣ ಶಿಕ್ಷಣವೇ ನಮಗೆ ಆಧಾರವೆಂದು ಮನಸಿಟ್ಟು ಓದುವ ಕಾರಣ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಪಡೆದು ನೌಕರಿ ಗಿಟ್ಟಿಸಿಕೊಂಡಿದ್ದಾರೆ.ವಿಶೇಷವಾಗಿ ಬಾಲಕಿಯರು ಈ ಹೊತ್ತಿನಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಶಿಕ್ಷಣವನ್ನು ಆಧಾರವಾಗಿಟ್ಟುಕೊಂಡು ಸಾಧನೆ ಮಾಡಬೇಕಿದೆ ಎಂದರು.

ಜಿಲ್ಲಾ ಉಪನ್ಯಾಸಕರ ಸಂಘದ ಅದ್ಯಕ್ಷ ಡಾ ಎಂ ರಾಜಣ್ಣ ಇವರು ಮಾತನಾಡುತ್ತಾ ಮಹಿಳೆಯರಿಗೆ ಶಿಕ್ಷಣ ಸಿಗಬೇಕಾದರೆ ಇತಿಹಾಸದಲ್ಲಿ ದೊಡ್ಡ ಕ್ರಾಂತಿಗಳೆ ನಡೆದಿವೆ,ಮಾತ್ರವಲ್ಲ ಜಾಗತಿಕವಾಗಿ ಮಹತ್ತರ ಬದಲಾವಣೆಗೆ ಮಹಿಳಾ ಶಿಕ್ಷಣ ಕಾರಣವಾಗಿದೆ .ಇಂದು ನೀವು ಸಹಿತ ಗುಣಾತ್ಮಕ ಶಿಕ್ಷಣ ಪಡೆದು ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗಲು ಕರೆನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾದ ಶಮೀಮಾ ಜೋಹರ್ ಮಾತನಾಡಿ ಕಾಲೇಜು ಅಭಿವೃದ್ಧಿಯಲ್ಲಿ ಎಲ್ಲಾ ಸಹಕಾರ ನೀಡಲಾಗುವುದು,ಅಂಕಗಳ ಜೊತೆ ಸಂಸ್ಕೃತಿ ,ಮಾನವೀಯತೆ,ತ್ಯಾಗ,ಸಹಕಾರದಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕಿವಿಮಾತು ಹೇಳಿದರು.

ಕಾರ್ಯಕ್ರಮ ದಲ್ಲಿ ಕಳೆದ ವರ್ಷ ದ್ವಿತೀಯ ಪಿಯುಸಿ ಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಅದ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ‌ ಪ್ರಾಂಶುಪಾಲರಾದ ಸುಲೇಖ ಬಿ ಇವರು ಮಾತನಾಡಿದ ಅವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾಲೇಜಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಮಾರ್ಗದರ್ಶನ ನೀಡಲಾಗುತ್ತದೆ.ಶಿಕ್ಷಣದ ಜೊತೆ ಉದ್ಯೋಗ ಮಾರ್ಗದರ್ಶನ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಗೋವಿಂದ ರಾಜು,ಸುರೇಂದ್ರ,ಉಪಸ್ಥಿತಿಯಿದ್ದರು,ಕಾರ್ಯಕ್ರಮ ಕ್ಕೆ ಸ್ವಾಗತಿಸಿದವರು ಉಪನ್ಯಾಸಕರಾಗದ ಶ್ಯಾಮಣ್ಣ,ವಂದಿಸಿದವರು ಪಿ ಜಿ ಶಶಿಧರ,ನಿರೂಪಿಸಿದವರು ಚಾಂದ್ ಪಾಷಾ.ಸಾಂಸ್ಕ್ರತಿಕ ಕಾರ್ಯಗಳನ್ನು ನಡೆಸಿಕೊಟ್ಟವರು ಉಪನ್ಯಾಸಕರಾದ ಜ್ಯೋತಿ ಎಚ್ ಎಂ.ನೂರಾರು ವಿದ್ಯಾರ್ಥಿಗಳು ನಾಡು-ರಾಷ್ಟ್ರಭಕ್ತಿಗೆ ಪೂರಕವಾದ ಹಾಡು,ನೃತ್ಯ.ಕಿರು ನಾಟಕಗಳನ್ನು ಪ್ರಸ್ತುತ ಪಡಿಸಿದರು.

Leave a Reply

Your email address will not be published. Required fields are marked *

error: Content is protected !!