
ಸಂಭ್ರಮದಿಂದ ಜರುಗಿದ ಎಜುಕೇರ ಇಂಗ್ಲೀಷ ಮಿಡಿಯಮ್ ಶಾಲಾ ವಾರ್ಷಿಕೋತ್ಸವ
ಮಕ್ಕಳನ್ನು ಮೊಬೈಲ್ ,ಟಿವಿಯಿಂದ ದೂರವಿಡಿ: ಡಾ ವಿಜಯನಾಥ ಇಟಗಿ
ಕರುನಾಡು ಬೆಳಗು ಸುದ್ದಿ
ಕೊಪ್ಪಳ, 20- ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರವಿಡಿ. ಪಾಲಕರು ಮೈ ಮರೆಯದೆ ಜಾಗುರುಕರಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಕಿಮ್ಸ್ ನಿರ್ದೇಶಕ ಡಾ. ವಿಜಯನಾಥ ಇಟಗಿ ಹೇಳಿದರು .
ಅವರು ನಗರದ ಕಿನ್ನಾಳ ರಸ್ತೆಯ ಎಜುಕೇರ ಇಂಗ್ಲೀಷ ಮಿಡಿಯಮ್ ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಶಿಕ್ಷಣದ ಜೋತೆಗೆ ಕ್ರೀಡೆ, ಸಂಗೀತ ಸೇರಿದಂತೆ ಅವರ ಆಶಯದಂತೆ ಕಲಿಕೆಗೆ ಬಿಡಿ . ಶಿಕ್ಷಣ ದಂತೆ ಕ್ರೀಡೆಗೆ ಮಹತ್ವ ನೀಡಿ ಎಂದು ಹೇಳಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಕನ್ನಡ ಪ್ರಭಾ ಪತ್ರಿಕೆ ಹಿರಿಯ ವರದಿಗಾರ ಸೋಮರಡ್ಡಿ ಅಳವಂಡಿ ಮಾತನಾಡಿ ಜಗತ್ತು ಆಳುತ್ತಿರುವುದು ಶಿಕ್ಷಣ ಒಳ್ಳೆಯ ಐಡಿಯಾ . ಮಗುವಿಗೆ ಉತ್ತಮ ಸಂಸ್ಕಾರ ನೀಡಿ ಮಕ್ಕಳಲ್ಲಿ ಆಗಾದವಾದ ಜ್ಞಾನ ವಿದೆ ಅವರಿಗೆ ದಾರಿ ತೋರುವ ಕೆಲಸವಾಗಬೇಕು.
ನಮ್ಮ ಆಲೋಚನೆ ಸಮಾಜ ಮುಖವಾಗಿರಬೇಕು ಹಾಗೂ ಪಾಲಕರು ಮತ್ತು ಶಿಕ್ಷಕರು ಕಾಳಜಿ ವಹಿಸಿ ಮಗುವನ್ನು ಮಗುವಾಗಿ ಬೆಳೆಯಲಿ ಜಗತ್ತಿಗೆ ಬೆಳಕು ನೀಡುವಂತಾಗಲಿ ಎಂದರು.
ನಗರಸಭಾ ಸದಸ್ಯ ಮತ್ತು ರಾಜ ಕುಷ್ಟಗಿ ಮಾತನಾಡಿ ಪಾಲಕರು ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ ಕೇವಲ ಓದು ಅಷ್ಟೇ ಜೀವನವಲ್ಲಾ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳ ಬೇಡಿ ಎಂದು ಹೇಳಿದರು.
ನಿವೃತ್ತಿ ಪ್ರಾಚಾರ್ಯ ಸೋಮನಗೌಡ ಪಾಟೀಲ್ ಮಾತನಾಡಿ ಎಜುಕೇರ ಶಾಲೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಈ ಶಾಲೆ ಉನ್ನತವಾದ ಮಟ್ಟಕ್ಕೆ ಬೆಳೆದು ಹೆಸರು ಮಾಡಲಿ ಎಂದು ಆಶಿಸಿದರು.
ಶಾಲಾ ಸಂಸ್ಥೆ ಅಧ್ಯಕ್ಷ ಡಾ. ಶ್ರೀನಿವಾಸ ಹ್ಯಾಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮೇ ತಿಂಗಳಲ್ಲಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಆಗಲಿದ್ದು ಮಕ್ಕಳ ಹಿತದೃಷ್ಟಿಯಿಂದ ಹಾಗೂ ಪಾಲಕರ ಆಶಯದಂತೆ ಉತ್ತಮ ಗುಣಮಟ್ಟದ ಕಟಡದಲ್ಲಿ ಮುಂದಿನ ವರ್ಷ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಸಮಾಜ ಸೇವಕರಾದ ಬಸವರಾಜ ನೀರಘಂಟಿ, ಕರುನಾಡ ಬೆಳಗು ಸಂಪಾದಕ ಸಂತೋಷ ದೇಶಪಾಂಡೆ, ಶಾರದಾ ಇಂಟರ್ ನ್ಯಾಷನಲ್ ಶಾಲೆಯ ಪಿಆರ್ ಓ ಮೃತ್ಯುಂಜಯ ರಾಂಪೂರ, ಅಂಜುಮನ್ ಕಮಿಟಿ ಅಧ್ಯಕ್ಷ ಆಸೀಪ್ ಕರ್ಕಿಹಳ್ಳಿ, ಶಾಲೆ ಮುಖ್ಯೋಪಾಧ್ಯಾಯರಾದ ಗಿರಿಜಾಪತಿ ಸ್ವಾಮಿ ವೇದಿಕೆಯಲ್ಲಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡೆಯಲ್ಲಿ ವಿಜಯತ ವಿದ್ಯಾರ್ಥಿಗಳಿಗೆ ಭಹುಮಾನ ವಿತರಣ ಕಾರ್ಯಕ್ರಮ ಜರುಗಿತು.