ನಾಳೆ ಪೂರ್ವಭಾವಿ ಸಭೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಸಮಿತಿ ವತಿಯಿಂದ ಇದೇ ಸೆಪ್ಟೆಂಬರ್ 7 ರಂದು ಹಮ್ಮಿಕೊಂಡಿರುವ ಒಂದು ದಿನದ ಸಾಂಕೇತಿಕ ಧರಣಿಯ ಕುರಿತು ಚರ್ಚಿಸಲು, ನಾಳೆ 03-09-2026, ಗುರುವಾರ ಸಂಜೆ 4:30 ಕ್ಕೆ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಸದರಿ ಸಭೆಯು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಜರುಗಲಿದ್ದು, ಸರ್ವರೂ ಆಗಮಿಸಿ ಹೋರಾಟದ ರೂಪುರೇಷೆಗಳ ಕುರಿತು ಸೂಕ್ತ ಸಲಹೆ-ಸೂಚನೆಗಳನ್ನು ನೀಡಬೇಕಾಗಿ ವಿನಂತಿ.
ಇಂತಿ,
ಸಂತೋಷ್ ದೇಶಪಾಂಡೆ (ಜಿಲ್ಲಾಧ್ಯಕ್ಷರು)
ಹಾಗೂ ಸಮಿತಿಯ ಪದಾಧಿಕಾರಿಗಳು
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಸಮಿತಿ, ಕೊಪ್ಪಳ.
