WhatsApp Image 2024-03-30 at 4.04.36 PM

ಅಕ್ರಮ ಮದ್ಯ ಜಪ್ತಿ : 3 ಪ್ರಕರಣ ದಾಖಲು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,30- ಲೋಕಸಭೆ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಹೊಂದುವಿಕೆ ಮತ್ತು ಸಾಗಾಣಿಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 3 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್. ಮಂಜುನಾಥ ಅವರು ತಿಳಿದ್ದಾರೆ.

ಬಳ್ಳಾರಿ-ಬೆಂಗಳೂರು ಬೈಪಾಸ್ ರಸ್ತೆಯಲ್ಲಿನ ಟೋಲ್ ಗೇಟ್ ಹತ್ತಿರ ರಸ್ತೆಗಾವಲು ವೇಳೆ ಕಪ್ಪು ಬಣ್ಣದ ಹೊಂಡಾ ಆಕ್ಟಿವಾ ವಾಹನ ದ್ವಿ ಚಕ್ರ ವಾಹನದಲ್ಲಿ 03 ಲೀಟರ್ (ಅಂದಾಜು ಮೌಲ್ಯ ರೂ.30,650) ಶೇಂದಿಯನ್ನು ಮಾರಾಟದ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸವಾರನ್ನು ವಶಕ್ಕೆ ಪಡೆದುಕೊಂಡು ಸೇಂದಿ ಹಾಗೂ ವಾಹನವನ್ನು ಜಪ್ತುಮಾಡಿ ಪ್ರಕರಣ ದಾಖಲಿಸಲಾಗಿದೆ.

ಕಂಪ್ಲಿ ಪಟ್ಟಣದ ಕಂಪ್ಲಿ-ಸಣಾಪುರ ರಸ್ತೆಯ ಜೋಡು ಕಾಲುವೆ ಬಳಿ ರಸ್ತೆಗಾವಲು ಮಾಡುತ್ತಿದ್ದ ಸಮಯದಲ್ಲಿ ಟಿವಿಎಸ್ ಎಕ್ಸ್‍ಎಲ್ ಸೂಪರ್ ಹೆವ್ಹಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ 6.480 ಲೀ. (ಅಂದಾಜು ಮೌಲ್ಯ ರೂ.12,881) ಮದ್ಯವನ್ನು ಸಾಗಾಣಿಕೆಯನ್ನು ಪತ್ತೆಹಚ್ಚಿ, ವಾಹನ ಸವಾರನ್ನು ವಶಕ್ಕೆ ಪಡೆದುಕೊಂಡು ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿ, ಪ್ರಕರಣ ದಾಖಲಿಸಲಾಗಿದೆ.

ಸ್ವಾಮಿಹಳ್ಳಿಯಿಂದ ತೊಣಸಿಗೇರೆಗೆ ಹೋಗುವ ರಸ್ತೆಯಲ್ಲಿ ರಸ್ತೆಗಾವಲು ಸಮಯದಲ್ಲಿ ಟಿವಿಎಸ್ ಕಂಪನಿಯ  ಎಕ್ಸ್‍ಎಲ್ 100 ಹೆವಿಡ್ಯೂಟಿ ದ್ವಿ ಚಕ್ರ ವಾಹನದಲ್ಲಿ 6.300 ಲೀ. (ಅಂದಾಜು ಮೌಲ್ಯ ರೂ.32800) ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸವಾರನ್ನು ವಶಕ್ಕೆ ಪಡೆದುಕೊಂಡು ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!