
ದಲಿತ ಸಂಘಟನೆಗಳ ನಡುವೆ ಬೆಂಕಿ ಹಚ್ಚಿದರೆ ಹುಷಾರ
Bspl ಕಾರ್ಖಾನೆಗೆ ಮಲ್ಲಿಕಾರ್ಜುನ ಪೂಜಾರ ಎಚ್ಚರಿಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 06- ಜಿಲ್ಲೆ ಹಾಗೂ ತಾಲೂಕ ದಲಿತ ಮುಖಂಡರು
Bspl ಕಾರ್ಖಾನೆ ವಿರುದ್ಧ ಹೋರಾಟ ಮಾಡುತ್ತೆವೆ , ಕಾರ್ಖಾನೆ ಮಾಲಿಕರು ದಲಿತ ಸಂಘಟನೆ ಮುಖಂಡ ನಡುವೆ ಜಗಳ ಹಚ್ಚುವ ಕೆಲಸ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾದಿಗ ಮಹಾಸಭಾ ಮುಖಂಡ ಮಲ್ಲಿಕಾರ್ಜುನ ( ಮಲ್ಲು ) ಪೂರಾಜ ಎಚ್ಚರಿಕೆ ನೀಡಿದರು.
ಅವರು ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದರು , ಕಾರ್ಖಾನೆ ಬೇಕು ಎನ್ನುವವರು ಕೆಲ ಗಂಗಾವತಿ – ಕಾರಟಗಿ ಭಾಗದ ಪುಡಿ ದಲಿತ ಮುಖಂಡರನ್ನು ನಮ್ಮ ವಿರೋಧ ಕಾರ್ಖಾನೆಯವರು ಎತ್ತಿಕಟ್ಟುವ ಕೆಲಸ ನಡೆಸಿದ್ದಾರೆ ಎಂದರು.
ದಲಿತರ ಮುಖಂಡರ ಹೆಸರಿನಲ್ಲಿ ಕಾರ್ಖಾನೆಯ ಪರ ಇರುವವರು mspl ಎಷ್ಟು ದಲಿತರಿಗೆ ಉದ್ಯೋಗ ನೀಡಿದೆ , ಒಬ್ಬ ದಲಿತರನ್ನು ಕೆಲಸ ಕೊಟ್ಟಿಲ್ಲ ಕಾರ್ಖಾನೆಯ ಮೋಸವನ್ನು ಎಲ್ಲರು ಗಮನಿಸಬೇಕು ಎಂದರು.
ಕೊಪ್ಪಳದ ಎಲ್ಲಾ ದಲಿತ ಮುಖಂಡರು ಹಾಗೂ ದಲಿತು ಕಾರ್ಖಾನೆ ಬೇಡ ಎನ್ನುವ ನಿಲುವಿಗೆ ಬದ್ಧರಿದ್ದೇವೆ , ಅಗತ್ಯ ಬಿದ್ದರೆ ಗವಿಶ್ರೀಗಳು ಹೇಳಿದರೆ ಊಗ್ರ ಹೋರಾಟಕ್ಕು ಸಿದ್ದರಿದ್ಧೇವೆ ಎಂದರು.
ಈ ಸಂದರ್ಭದಲ್ಲಿ ದಲಿತ ವಿವಿಧ ಸಂಘಟನೆಯ ಮುಖಂಡರಾದ ಸಿದ್ದು ಮಣ್ಣಿನವರ ,ಯಂಕಪ್ಪ ಹೊಸಳ್ಳಿ, ಮುಕಪ್ಪ ಮೇಸ್ತ್ರಿ , ಯಲ್ಲಪ್ಪ ಇತರರು ಇದ್ದರು.