ಹುಲಗಿ ; ನದಿಯಲ್ಲಿ ಕಾಲು ಜಾರಿಬಿದ್ದು ಯುವಕ ನಾಪತ್ತೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಗೌರಿ ಹುಣ್ಣಿಮೆಯಂದು ಕೊಪ್ಪಳ. ತಾಲೂಕಿನ ಹುಲಿಗಿಯ ಬಳಿಯತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ಯುವಕ ನಾಪತ್ತೆಯಾಗಿದ್ದಾನೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದ್ರಿಕೋಟಗಿ ಗ್ರಾಮದ ಯುವಕ ಕನಕಪ್ಪ(17) ನಾಪತ್ತೆ ಆಗಿರುವ ಯುವಕನಾಗಿದ್ದಾನೆ.
ಸೋಮವಾರ ಸಂಜೆ ಘಟನೆ ನಡೆದಿದ್ದು, ಗೌರಿಹುಣ್ಣಿಮೆ ಹಿನ್ನಲೆ ಕುಟುಂಬದೊಂದಿಗೆ ಯುವಕ ಹುಲಿಗಿಗೆ ಹೋಗಿದ್ದ.
ಸಂಜೆ ನದಿಯ ನೀರು ಕುಡಿಯಲು ಹೋಗಿದ ವೇಳೆಯಲ್ಲಿ ದುರ್ಘಟನೆ ನಡೆದಿದೆ.
ಅಗ್ನಿ ಶಾಮಕ ದಳ, ಪೊಲೀಸರು ಈವರೆಗೆ ಹುಡುಕುವ ಪ್ರಯತ್ನ ಮಾಡುತ್ತಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
